Search This Blog

Sunday 16 July 2017

ಶಿಕ್ಷಣತಜ್ಞ ಆ್ಯಂಟನ್ ಸಿಮೊನೊವಿಚ್ ಮೆಕರೆಂಕೊ ಮತ್ತವನ ತತ್ವಗಳು


                     
                              
              ಶಿಕ್ಷಣತಜ್ಞ ಆ್ಯಂಟನ್ ಸಿಮೊನೊವಿಚ್
   ಮೆಕರೆಂಕೊ ಮತ್ತವನ ತತ್ವಗಳು
                                            ಡಾ ಬಿ ವಿ ಮಹೀದಾಸ
ಮೆಕರೆಂಕೋ ಹಿಂದಿನ ಸೋವಿಯಟ್ ಯೂನಿಯನ್ನಿನ ಒಬ್ಬ ಮೇಧಾವೀ ಶಿಕ್ಷಣತಜ್ಞ. ಉಕ್ರೇನಿನವನು. ಕಮ್ಯನಿಸ್ಟ್ ಚೌಕಟ್ಟಿನಲ್ಲಿ ಪ್ರಜಾಪ್ರಭುತ್ವದ ರೀತಿನೀತಿಗಳನ್ನು ಶಿಕ್ಷಣಕ್ಕೆ ಅಳವಡಿಸಿದವನು. ಪ್ರಥಮ ಮಹಾ ಯುದ್ಧ ಮತ್ತು ರಶ್ಯನ್ ಮಹಾಕ್ರಾಂತಿಯನಂತರ ಅನಾಥರಾಗಿ ರೌಡಿತನಕ್ಕಿಳಿದ ಹಲವು ಮಕ್ಕಳನ್ನು ಸುಶಿಕ್ಷತರನ್ನಾಗಿಸುವ ಹೊಣೆಹೊತ್ತು ಯಶಸ್ವಿಯಾಗಿ ನಿರ್ವಹಿಸಿದವನು; ಕೇವಲ ಒಂದು ವರ್ಷದಲ್ಲಿ ಅವರನ್ನುಶಿಸ್ತುಬದ್ಧ ಕೆಲಸಗಾರ ಸಮಷ್ಟಿಯನ್ನಾಗಿ ರೂಪಿಸಿಬಿಟ್ಟನು. ಶಿಕ್ಷಣದ ಜೊತೆಗೆ ಸಾಹಿತ್ಯದಲ್ಲಿಯೂ ಕೃಷಿ ಮಾಡಿದವನು; ಅದರಲ್ಲಿಯೂ ಯಶಸ್ಸು ಗಳಿಸಿದವನು. ಇತರ ದೇಶಗಳಲ್ಲಿ ಅಷ್ಟೊಂದು ಹೆಸರಿಲ್ಲದಿದ್ದರೂ (ಕಮ್ಯುನಿಸ್ಟ್ ದೇಶದವನಾದ್ದರಿಂದ ಇರಬಹುದು) ರಶ್ಯದಲ್ಲಿ ಮತ್ತು ಹಿಂದಿನ ಸೋವಿಯಟ್ ಯೂನಿಯನ್ನಿನ ಇಂದಿನ ಸ್ವತಂತ್ರ ದೇಶಗಳಲ್ಲಿ ಇಂದಿಗೂ ಖ್ಯಾತನಾಗಿರುವವನು. ಇವನ ಶಿಕ್ಷಣ ತತ್ವಗಳು ನಮಗೂ ಮಾರ್ಗದರ್ಶಕ ಮತ್ತು ಹೊಸ ಹೊಳಹುಗಳನ್ನು ನೀಡುವಂತಹವು.
                             ಇವನ ಜೀವನದ ಮುಖ್ಯ ರೂಪುರೇಷೆಗಳನ್ನು ಹೀಗೆ ಗುರುತಿಸಬಹುದು:
ಜನನ                      13ನೆಯ ಜನವರಿ 1888, ಬೆಲೋಪೋಲ್, ರಶ್ಯನ್ ಚಕ್ರಾಧಿಪತ್ಯ
ಮರಣ                     1ನೆಯ ಏಪ್ರಿಲ್ 1939 (51ನೆಯ ವಯಸ್ಸಿನಲ್ಲಿ)
                              ಗೊಲಿತ್ಸಿನೊ, ಸೋವಿಯಟ್ ಯೂನಿಯನ್
ವೃತ್ತಿ                     ಶಿಕ್ಷಣತಜ್ಞ, ಲೇಖಕ ಮತ್ತು ಸಮಾಜ ಸುಧಾರಕ
ಭಾಷೆ                     ರಷ್ಯನ್
ಪದವಿ                     1905, ಕ್ರೆಮೆನ್ಚುಗ್-ನಲ್ಲಿ. ಅನಂತರ ಒಂದು ವರ್ಷದ ಅಧ್ಯಾಪಕ ತರಬೇತಿ
ಅಧ್ಯಾಪಕ ವೃತ್ತಿ}       1919ರಿಂದ ಪೋಲ್ಟಾವ ಮತ್ತು ಕ್ರ್ಯುಕೋವ್-ಗಳಲ್ಲಿ.
ಇಷ್ಟರ ಮಧ್ಯೆ       ಸೇನೆಯಲ್ಲೂ ಕಾರ್ಯನಿರ್ವಹಿಸಿದ. 1920ರಲ್ಲಿ ಗಾರ್ಕಿ ಕಾಲೊನಿಯಲ್ಲಿ ಅನಾಥ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅವನಿಗೆ ವಹಿಸಲಾಯಿತು. ಇಲ್ಲಿಯೂ ಅನಂತರ ಜರ್-ಜಿನ್-ಸ್ಕಿ ಕಮ್ಯೂನ್ನಲ್ಲಿಯೂ ಅಧ್ಯಾಪನ ಮತ್ತು ಮೇಲುಸ್ತುವಾರಿ ಎರಡೂ ಜವಾಬ್ದಾರಿಗಳನ್ನುಸಮರ್ಪಕವಾಗಿ ನಿರ್ವಹಿಸಿದ.  ಗಲೀನಾ ಸ್ತಾಹೀವ್ನಾ ಇವನ ಪತ್ನಿ.
                                                                                        (ವಿಕಿಪೀಡಿಯದಿಂದ)

          1920 ಮೆಕರೆಂಕೋನ ಜೀವನದ ಮಹತ್ವದ ಗಳಿಗೆ. ಉಕ್ರೇನಿನ ಅಧಕಾರಿಗಳು ಒಂದು ವಿಶಿಷ್ಟ ಜವಾಬ್ದಾರಿಯನ್ನು ಅವನಿಗೆ ವಹಿಸಿದರು. ಪೋಲ್ಟೋವಾ ಲೇಬರ್ ಕಾಲನಿಯಲ್ಲಿ ಮನೆಮಠ ಕಳೆದುಕೊಂಡ ಅಪರಾಧ ಹಿನ್ನೆಲೆಯ ಮಕ್ಕಳಿಗೆ ಕಲಿಸುವ ಮತ್ತು ಅವರನ್ನು ನೋಡಿಕೊಳ್ಳುವ ಕೆಲಸ; ಅದರ ನಿರ್ದೇಶಕ ಹುದ್ದೆ. ಆ ಕೆಲಸವನ್ನು ಅವನು ಒಪ್ಪಿಕೊಂಡ. ಮೆಕರೆಂಕೊ ತನ್ನ ಯೋಚನೆ ಮತ್ತು ಕೆಲಸಗಳಲ್ಲಿ ಸಮಕಾಲೀನ ಮ್ಯಾಕ್ಸಿಮ್ ಗಾರ್ಕಿಯಿಂದ ಪ್ರಭಾವಿತನಾಗಿದ್ದು ಬಾಲಾಪರಾಧಿಗಳ ಈ ಶಾಲೆಗೆ ಗಾರ್ಕಿ ಕಾಲೊನಿ ಎಂದು ಹೆಸರಿಟ್ಟ.
ಈ ಕೆಲಸಕ್ಕಾಗಿ ಅವನಿಗೆ ಕೊಟ್ಟ ಜಾಗ ಒಂದು ಕೃಷಿಕ ಎಸ್ಟೇಟು. ಅದರಲ್ಲಿ ಒಂದಷ್ಟು ಜಾಗ, ಕೆಲವು ಕಟ್ಟಡಗಳು ಇದ್ದವು. ಕಟ್ಟಡಗಳು ಸುವ್ಯವಸ್ಥಿತವಾಗಿರಲಿಲ್ಲ. ಸ್ಥಳೀಯರಿಂದ ಕಳವು ಮತ್ತು ನಾದುರಸ್ಥಿಗೆ ಪಕ್ಕಾಗಿದ್ದವು. ಕೆಲವೆಡೆ ಕಿಟಕಿಗಳನ್ನೇ ಕದ್ದೊಯ್ದಿದ್ದರು. ಇವುಗಳ ಸುವ್ಯವಸ್ಥೆಗೆ ಅನುದಾನ ಅಲ್ಪಪ್ರಮಾಣದ್ದಾಗಿತ್ತು. ಪರಿಮಿತ ಅನುದಾನದಿಂದಲೇ ಮೆಕರೆಂಕೊ ವ್ಯವಸ್ಥೆಯನ್ನು ಮಕ್ಕಳಿಗೆ ಇರಲು ಯೋಗ್ಯವಾಗುವಂತೆ ಸರಿಪಡಿಸಿದ. ಇಂತಹವೆಲ್ಲಇವನ ಆಡಳಿತ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತವೆ.
ಅವನ ಅಧೀನಕ್ಕೆ ಕೊಟ್ಟ ಮಕ್ಕಳೆಲ್ಲಕ್ರಿಮಿನಲ್ ಹಿನ್ನೆಲೆಯವರು. ಕಾಲೊನಿಯ ತಮ್ಮ ಆರೈಕೆದಾರರನ್ನು ಗೌರವಿಸುವಂತಹವರಾಗಲೀ ಶಿಸ್ತನ್ನು ಪಾಲಿಸುವವರಾಗಲೀ ಅಲ್ಲ. ಹೊಟ್ಟೆ ಹೊರೆಯಲು ಅಲ್ಲಿದ್ದ ಖಾಲಿ ಜಾಗದಲ್ಲಿ ಕೃಷಿ ಮಾಡಲೇ ಬೇಕಾಗಿತ್ತಾದರೂ ಈ ಮಕ್ಕಳು ಅದಕ್ಕೆ ಒಗ್ಗುವುದು ಕಷ್ಟವಾಗಿತ್ತು. ಮೊದಲಿನಂತೆ ಕದ್ದು ಅಥವ ಇತರರನ್ನು ಬೆದರಿಸಿ ಕಿತ್ತುಕೊಳ್ಳುವ ಮೂಲಕ ಬೇಕಾದ್ದನ್ನು ಪಡೆದುಕೊಳ್ಳುವುದರತ್ತ ಅವರ ಒಲವು. ಹೀಗೆ ಕಾಲೊನಿ ಹೆಚ್ಚುತ್ತಿರುವ ಅಪರಾಧಿಗಳ ನೆಲೆಯಂತಾಯಿತು.
ಈ ಎಲ್ಲದರ ನಡುವೆಯೇ ಮೆಕರೆಂಕೊ ನಿರಂತರವಾಗಿ ಕಾರ್ಯಮಗ್ನನಾಗಿ ಒಂದರನಂತರ ಒಂದರಂತೆ ಎರಗುತ್ತಿದ್ದ ಸವಾಲುಗಳನ್ನು ಬಿಡಿಸುತ್ತಾ ಹೊರಟನು. ಜೊತೆಜೊತೆಗೆ ಇವರನ್ನು ಸುಶಿಕ್ಷಿತರನ್ನಾಗಿಸಲು ಯೋಗ್ಯ ಕಲಿಕಾನಿಯಮಗಳನ್ನು ರೂಪಿಸಲೂ ತೊಡಗಿದ. ಇಂತಹ ಪ್ರಯತ್ನಗಳು ಫಲ ನೀಡಿದವು. ಕಾಲೊನಿಯ ಈ ತರುಣರು ಉತ್ಪಾದಕ ಕೆಲಸದಲ್ಲಿ ತೊಡಗಿದರು. ಕೃಷಿ ಪ್ರಾರಂಭವಾಯಿತು, ಫಲ ನೀಡತೊಡಗಿತು. ಯಾಂತ್ರಿಕ ಕಾರ್ಯ ಶಾಲೆಗಳು ತೆರೆಯಲ್ಪಟ್ಟವು ಮತ್ತು ಹಲವರು ಇವುಗಳಲ್ಲಿ ಕಾರ್ಯ ಪ್ರವೃತ್ತರಾದರು. ಹೀಗೆ ಮೆಕರೆಂಕೊ ಈ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಸಮರ್ಥ ನಾದ.
ಅನಂತರ ಅವನು ಜರ್-ಜಿನ್-ಸ್ಕಿ ಕಮ್ಯೂನ್ ಅನಾಥಾಲಯದ ನಿರ್ದೇಶಕನಾಗಿ ಜವಾಬ್ದಾರಿ ವಹಿಸಿಕೊಂಡ. ಅಲ್ಲಿಯೂ ಗಾರ್ಕಿ ಕಾಲೊನಿಯ ರೀತಿಗಳೇ ಪುನರಾವರ್ತನೆಗೊಂಡವು. ಇಲ್ಲಿ ಕೃಷಿ ಕಾರ್ಯವಿರಲಿಲ್ಲ. ಬದಲಾಗಿ ಮೂರು ಕಾರ್ಯಾಗಾರಗಳಿದ್ದವು. ಇವುಗಳಲ್ಲಿ ಪಾದರಕ್ಷೆ ತಯಾರಿ, ಬಟ್ಟೆ ಹೊಲಿಯುವುದು ಮತ್ತು ಅಲಮಾರಿ ತಯಾರಿಕೆ – ಈ ಬಗ್ಗೆ ತರಬೇತಿ ನೀಡಲಾಗುತ್ತಿತ್ತು. ಕೆಲವು ವರ್ಷಗಳನಂತರ ಈ ವಸ್ತುಗಳ ತಯಾರಿ ಮತ್ತು ಮಾರಾಟ ಈ ಕೇಂದ್ರಗಳ ಕೆಲಸವಾಯಿತು. ಇಲ್ಲಿಯೂ ಮೊದಮೊದಲು ಶಿಬಿರಾರ್ಥಿಗಳು ಅಸಮಾಜಿಕವಾಗಿ ವರ್ತಿಸಿದರೂ ಮೆಕರೆಂಕೊನ ಪ್ರಯತ್ನಗಳ ಫಲವಾಗಿ ಅವರು ಉತ್ತಮ ಕುಶಲಕರ್ಮಿಗಳಾಗಿ ರೂಪುಗೊಂಡರು.
ಇವನು ತನ್ನ ಶಿಕ್ಷಣ ಪದ್ಧತಿಯಲ್ಲಿ ಪ್ರಜಾಪ್ರಭುತ್ವ ರೀತಿನೀತಿಗಳನ್ನು ಬಳಸುತ್ತಿದ್ದ. ಇದರಿಂದ ಆಗ ಅಲ್ಲಿ ಅಧಿಕಾರದಲ್ಲಿದ್ದ ಕಮ್ಯುನಿಸ್ಟ್ ಒಡೆಯರು ಅಸಮಾಧಾನಗೊಂಡರು. 1937 ಫೆಬ್ರುವರಿಯಲ್ಲಿ ಮೆಕರೆಂಕೊನ ಸಹೋದ್ಯೋಗಿಗಳನ್ನೂ ಸ್ನೇಹಿತರನ್ನೂ ಬಂಧಿಸಿದರು. ಕ್ರಾಂತಿವಿರೋಧೀ ಚಟುವಟಿಕೆಗಳಿಗಾಗಿ ಅವರನ್ನು ‘ವಿಚಾರಣೆ’ ನಡೆಸಿ ಶಿಕ್ಷಿಸಲಾಯಿತು. ಮೆಕರೆಂಕೊಗೆ ತಾನು, ತನ್ನ ಕುಟುಂಬ ಮತ್ತು ತನ್ನ ಉಳಿದ ಸ್ನೇಹಿತರೂ ಅಪಾಯದಲ್ಲಿರುವುದು ಸ್ಪಷ್ಟವಾಯಿತು. ತನ್ನ ಹುದ್ದೆಗೆ ರಾಜೀನಾಮೆ ಕೊಟ್ಟ. ಉಕ್ರೇನನ್ನು ತೊರೆದ. ಮಾಸ್ಕೋಗೆ ಹೋಗಿ ಲೇಖಕ ಮತ್ತು ಭಾಷಣಕಾರನಾಗಿ ಹೊಸ ಬದುಕಿಗೆ  ಮೊದಲಿಟ್ಟ.   ಶಿಕ್ಷಣದ ಬಗ್ಗೆ ಅವನು ಹಲವು ಪುಸ್ತಕಗಳನ್ನು ಬರೆದ. Pedagogicheskaya poema (1933–35; ಇದರ ಇಂಗ್ಲಿಷ್ ಭಾಷಾಂತರ “Pedagogical Poem”); . The Road to Life; (or, Epic of Education), . Kniga dlya roditeley (1937; A Book for Parents) and Flagi na bashnyakh (1939; “Flags on the Battlements”) – ಇವು ಇವನ ಕೃತಿಗಳಲ್ಲಿ ಮುಖ್ಯವಾದುವು; ಜನಪ್ರಿಯವಾದುವು. The Road to Life ಕೃತಿಯು ಬಾಳ್ವೆಯ ದರ್ಶನ ಎಂದು ಕನ್ನಡಕ್ಕೆ ಅನುವಾದವಾಗಿದ್ದು ಮೈಸೂರು ವಿಶ್ವವಿದ್ಯಾಲಯದ ಗ್ರಂಥ ಭಂಡಾರದಲ್ಲಿರುವುದಾಗಿ ತಳಿದು ಬರುತ್ತದೆ. ಇಂಗ್ಲಿಷ್ ಅವತರಣಿಕೆ ಅಂತರ್ಜಾಲದಲ್ಲಿ ಭ್ಯವಿದೆ.  ಅವನು ಸಾಯುವುದಕ್ಕೆ ಎರಡು ತಿಂಗಳು ಮುಂಚೆ ಅವನ ಬರೆವಣಿಗೆಗಾಗಿ ಆರ್ಡರ್ ಆಫ್ ದಿ ರೆಡ್ ಬ್ಯಾನರ್ ಆಫ್ ಲೇಬರ್ ಪ್ರಶಸ್ತಿಯನ್ನು ಕೊಟ್ಟು ಅವನನ್ನು ಸನ್ಮಾನಿಸಿದರು.
ಮೇಲೆ ಹೇಳಿದ ಇವನು ಕೃತಿಗಳಲ್ಲಿ ಶಿಕ್ಷಣದ ಬಗ್ಗೆ ತನ್ನ ನಿಲುವುಗಳನ್ನು ಪ್ರತಿಪಾದಿಸಿದ್ದಾನೆ. ಪ್ರಥಮ ಮಹಾಯುದ್ಧ ಮತ್ತು ರಶ್ಯನ್ ಮಹಾ ಕ್ರಾಂತಿಗಳ ಪರಿಣಾಮವಾಗಿದ್ದ ಸಮಕಾಲೀನ ಸಾಮಾಜಿಕ ಪರಿಸ್ಥಿತಿ, ಮತ್ತು ಗಾರ್ಕಿ ಕಾಲೊನಿ, ಜರ್-ಜಿನ್ಸ್ಕಿ ಕಮ್ಯೂನ್-ಗಳಲ್ಲಿ ಇವನ ಶೈಕ್ಷಣಿಕ ಅನುಭವಗಳು - ಈ ಹಿನ್ನೆಲೆಯಲ್ಲಿ ಶಿಕ್ಷಣ ತತ್ವಗಳನ್ನು ಇವನು ನಿರೂಪಿಸಿದ್ದಾನೆ.  ಇವನ ಬಾಳ್ವೆಯ ದರ್ಶನ ಒಂದು ಕಾದಂಬರಿಯಾಗಿದ್ದು ಇದರಲ್ಲಿ ಮೆಕರೆಂಕೋನ ಆತ್ಮ ಚರಿತ್ರಾತ್ಮಕ ಅಂಶಗಳಿವೆ ಎಂದು ವಿಮರ್ಶಕರು ಗುರುತಿಸಿದ್ದಾರೆ.
ಮೆಕರೆಂಕೋಗೆ ಮಾನವನ ಒಳ್ಳೆಯತನದ ಬಗ್ಗೆ ಅಸೀಮ ನಂಬಿಕೆ. ಮಕ್ಕಳನ್ನು ಪರಸ್ಪರ ಹಿತಾಸಕ್ತಿಗಳನ್ನು ಕಾಯ್ದುಕೊಂಡು  ಒಂದು ನಿರ್ದಿಷ್ಟ ಗುರಿಸಾಧನೆಗೆ ನುಗ್ಗುವ ಸಮುದಾಯವನ್ನಾಗಿ ರೂಪಿಸಿದಾಗ ಉತ್ತಮ ಗುಣಗಳು ರೂಢಗೊಳ್ಳುತ್ತವೆ ಎಂದು ಅವನು ಪ್ರತಿಪಾದಿಸಿದ್ದಾನೆ. ಇಂತಹ ಸಮುದಾಯಕ್ಕೆ ಇವನು ಕೊಟ್ಟಿರುವ ಹೆಸರು ಕಲೆಕ್ಟಿವ್. ಇದು ವ್ಯಕ್ತಿಯನ್ನು ಹೊರಸಮಾಜಕ್ಕೆ ಸಂಪರ್ಕಿಸುವ ಕೊಂಡಿ. ಸಮಸ್ಯೆಗಳ ಬಗ್ಗೆ ಚರ್ಚೆಗಳು, ಒಂದು ತಂಡವಾಗಿ ಮಾಡುವ ಕೆಲಸ ಮತ್ತು ಆಸಕ್ತಿದಾಯಕ ಬಿಡುವಿನ ಚಟುವಟಿಕೆಗಳು ಮಕ್ಕಳ ಒಂದು ಗುಂಪನ್ನು ಕಲೆಕ್ಟಿವ್ ಆಗಿ ರೂಪಿಸುತ್ತವೆ.   ಆಗ ಸಾನುಕಂಪ, ಸಮುದಾಯಕ್ಕೆ ನಿಷ್ಠೆ ಇಂತಹ ಗುಣಗಳು ಬೆಳೆದು ಶಿಕ್ಷಣಕ್ಕೆ ನೆಲೆಯಾಗುತ್ತವೆ . ಬಾಳ್ವೆಯ ದರ್ಶನ ಕೃತಿಯಲ್ಲಿ ಅವನು ಶಿಕ್ಷಣ ನೀಡಬೆಕಾಗಿದ್ದ ಅಸಾಮಾಜಿಕ ಮಕ್ಕಳ ಮೇಲೆ  ನೈತಿಕತೆಯನ್ನು ಅಥವ ಶಿಸ್ತನ್ನು ಹೊರಗಡೆಯಿಂದ ಹೇರಿ ಅವರನ್ನು ಉತ್ತಮ ಕಲೆಕ್ಟಿವ್ ಆಗಿ ರೂಪಿಸಿದ್ದಲ್ಲ;  ಹೊರಗಡೆಯ ಪ್ರತಿಕೂಲ ವಾತಾವರಣದೊಡನೆ ಹೋರಾಡುವ ಸಂದರ್ಭದಲ್ಲಿ ಗುಂಪಿನಲ್ಲಿ ಒಗ್ಗೂಡಿಕೆ ಬಲ ಸಂವರ್ಧನೆಯಾಯಿತು.  ಜೊತೆಗೆ ಒಟ್ಟಾಗಿ ಸಾಹಸ, ತಂಡವಾಗಿ ಕೆಲಸ, ಸಂಗಾತಿಗಳಾಗಿ ಮನೋರಂಜನೆ – ಇಂತಹವುಗಳಿಂದ ಕಲೆಕ್ಟಿವ್ ಮತ್ತಷ್ಟು ಗಟ್ಟಿಯಾದ ಘಟಕವಾಗುತ್ತದೆ; ಪರಸ್ಪರ ಕಲಿಕೆ ಸಾಧ್ಯವಾಗುತ್ತದೆ. ನೈತಿಕತೆ ಬೆಳೆಯುತ್ತದೆ.   ಮಕ್ಕಳು ತಮಗೆ ತಾವೇ ಜವಾಬ್ದಾರರೆಂಬುದನ್ನು ಕಂಡುಕೊಳ್ಳುತ್ತಾರೆ.
ಅನುವಂಶೀಯತೆಯೋ ಪೋಷಣೆಯೋ ಯಾವುದು ಮಗುವಿನ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪಾತ್ರವಹಿಸುತ್ತದೆ ಎಂಬ ಪ್ರಶ್ನೆಗೆ: ಹುಟ್ಟಿನಿಂದ ಬರುವ ಕೆಲವು ಗುಣಗಳ ಮಹತ್ವವನ್ನು ಮೆಕರೆಂಕೊ ಅಲ್ಲಗಳೆಯುವುದಿಲ್ಲ; ಆದರೆ ಪರಿಸರ ಮತ್ತು ಪೋಷಣೆಗೆ ಅಗ್ರಸ್ಥಾನ ನೀಡುತ್ತಾನೆ. ಒಂದು ಮರ ಅಥವ ಹೂವು ತಾನೆತಾನಾಗಿ ಸ್ವಾಭಾವಿಕವಾಗಿ ಬೆಳೆಯುತ್ತವೆ; ಅಡೆತಡೆಗಳನ್ನು ಹೋಗಲಾಡಿಸದರಷ್ಟೆ ಸಾಕು ಎಂಬ ರೂಸೋನ ನಿಲುವನ್ನು ಇವನು ಸಂಪೂರ್ಣವಾಗಿ ಒಪ್ಪುವುದಿಲ್ಲ. ಅಧ್ಯಾಪಕ  ಒಬ್ಬ ಒಳ್ಳೆಯ  ತೋಟಗಾರನಂತೆ ಮಕ್ಕಳ ಬೆಳವಣಿಗೆಯನ್ನು ನಿರೀಕ್ಷಿಸುತ್ತಾ ಬೆಳವಣಿಗೆಯನ್ನು ಕಾಯ್ದುಕೊಳ್ಳಬೇಕೆಂಬುದು ಇವನ ಅಭಿಪ್ರಾಯ.  
          ಮೆಕರೆಂಕೋನ ಪದ್ಧತಿಯಲ್ಲಿ ಬೌದ್ಧಿಕ ಮತ್ತು ನೈತಿಕ ಬೆಳವಣಿಗೆಯಲ್ಲಿ ಕೆಲಸಕ್ಕೆ ಮಹತ್ವದ ಸ್ಥಾನ.  ಪ್ರತಿಯೊಬ್ಬ ವಿದ್ಯಾರ್ಥಿಗೆ ಶ್ರಮದ ಅಗತ್ಯವಿರುವ ಒಂದು ಕೆಲಸವನ್ನು ವಹಿಸಬೇಕು. ಮತ್ತು ಜವಾಬ್ದಾರಿಯ ಸ್ಥಾನಗಳನ್ನು ಕೊಡಬೇಕು. ಇದರಿಂದ ಮಕ್ಕಳು ತಮ್ಮ ಹಕ್ಕುಗಳು ಮತ್ತು ಸವಲತ್ತುಗಳಿಗಿರುವ ಪರಿಮಿತಿಗಳನ್ನು ತಿಳಿಯುತ್ತಾರೆ. ಅಧ್ಯಾಪಕರುಗಳೂ ಸ್ವಾರ್ಥರಹಿತವಾಗಿ ಗುರುತರವಾದ  ಕಾರ್ಯಗಳನ್ನು ವಹಿಸಿಕೊಂಡು ದುಡಿಯಬೇಕು. ಇದರಿಂದ ಮಕ್ಕಳ ದೃಷ್ಟಿಯಲ್ಲಿ ಅವರಿಗೆ ಸ್ವಾಭಾವಿಕವಾಗಿ ಗೌರವದ ಸ್ಥಾನ ದೊರಕುತ್ತದೆ. ಮಕ್ಕಳಿಗೆ ಪರಸ್ಪರ ಹಿತಕ್ಕಾಗಿ ಕೆಲಸಮಾಡುವುದು ಅಗತ್ಯ ಎಂಬ ಭಾವನೆ ಮೂಡುತ್ತದೆ. ಮಕ್ಕಳಿಗೆ ನಾವು ಇಷ್ಟನ್ನು ಉತ್ಪಾದಿಸಿದೆವೆಂಬ ಹೆಮ್ಮೆ ಇರಬೇಕೇ ಹೊರತು ಅವುಗಳನ್ನು ಹಂಚುವ ಬಳಸುವ ಮಾರಾಟಮಾಡುವ ಸಂಬಂಧಗಳಿರಬಾರದು. ನಮ್ಮ ಶಾಲೆಗಳಲ್ಲಿದ್ದ ಸಾಮಾಜಿಕ ಉಪಯುಕ್ತ ಉತ್ಪಾದಕ ಕೆಲಸ ಎಂಬ ಪರಿಕಲ್ಪನೆಯ ಮೂಲ ಇಲ್ಲಿದೆ.
          ಕಲಿಯುವ ವ್ಯಕ್ತಿಯಮೇಲೆ ಆದಷ್ಟೂ ಹೆಚ್ಚು ಕೆಲಸದ ಹೊರೆ ಹೊರಿಸಿ; ವ್ಯಕ್ತಿಯನ್ನು ಎಷ್ಟು ಹೆಚ್ಚು ಸಾಧ್ಯವೋ ಅಷ್ಟು ಗೌರವಿಸಿ. ಇದು ಅವನಿಗೆ ಕಲಿಯಲು ಪ್ರೋತ್ಸಾಹ ನೀಡುತ್ತದೆ. ವ್ಯಕ್ತಿ ಕಲೆಕ್ಟಿವ್-ದ ಸಾಮಾನ್ಯ ಒಳಿತಿಗನುಗುಣವಾಗಿ ಕೆಲಸ ಮಾಡುತ್ತಾನೆ. ಈ ರೀತಿಯ ವ್ಯಕ್ತಿಯ ಅಧೀನತೆ ವ್ಯಕ್ತಿಯ ಸ್ವತಂತ್ರ ವ್ಯಕ್ತಿತ್ವಕ್ಕೆ ಧಕ್ಕೆ ತರುವುದಿಲ್ಲ.
ಹಿರಿಯರು ಅಂದರೆ ತಂದೆ ತಾಯಿಗಳು ಮತ್ತು ಅಧ್ಯಾಪಕರು ಮಕ್ಕಳಿಗೆ ಧನಾತ್ಮಕ ಮಾದರಿಗಳಾಗಿ ಪರಿಣಮಿಸುತ್ತಾರೆ. ಗಾರ್ಕಿ ಕಾಲೊನಿಯಲ್ಲಿ ಹಿರಿಯ ಮಕ್ಕಳೂ ಕಿರಿಯರ ಮೇಲೆ ನಿರ್ಣಾಯಕ ಪ್ರಭಾವ ಬೀರಿದ್ದಿದೆ. ತಮ್ಮನ್ನು ಸ್ವೀಕರಿಸುವ ಮತ್ತು ಉತ್ತೇಜಿಸುವ ಆರೈಕೆದಾರರು  ಮಕ್ಕಳ ವೈಯಕ್ತಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಬಹುಮುಖ್ಯ. ಮಕ್ಕಳನ್ನು ನಾವು ಅಪರಾಧಿಗಳಂತೆ ನಡೆಸಿಕೊಂಡರೆ ಅವರು ಬಾಲಾಪರಾಧಿಗಳಾಗುತ್ತಾರೆ. ಅವರನ್ನು ಉತ್ತಮರಂತೆ ನಡೆಸಿಕೊಂಡರೆ ಸಹಜಸ್ವಭಾವದ ವ್ಯಕ್ತಿಗಳಾಗಿ ಬೆಳೆಯುತ್ತಾರೆ.
ಅನುಗಮನ ಪದ್ಧತಯಲ್ಲಿ ಕಲಿಸಬೇಕೆಂದು ಮೆಕರೆಂಕೊ ಪ್ರತಿಪಾದಿಸುತ್ತಾನೆ. ಅಂದರೆ ಉದಾಹರಣೆಗಳ ಮೂಲಕ ತತ್ವವೊಂದನ್ನು ನಿರೂಪಿಸುವ ಕ್ರಮ. ಇದೇ ಅಂತಿಮ ಮತ್ತು ಸಾರ್ವತ್ರಿಕ ಎಂಬುದು ಅವನಿಗೆ ಒಪ್ಪಿಗೆ ಇಲ್ಲ. ಅನುಗಮನವು ನಿಗಮನಕ್ಕೆ ಕೊಂಡಿ ಎಂಬುದು ಅವನ ಸಿದ್ಧಾಂತ. ‘ಅನುಭವವು ನಿಗಮನ ರೀತಿಯಲ್ಲಿ ತೆಗೆದುಕೊಂಡ ನಿರ್ಣಯಗಳಿಂದ ಬರುತ್ತದೆ’ ಎಂದು ಅವನು ಹೇಳುತ್ತಾನೆ. ಅಲ್ಲದೆ ಇವು ಮೊದಲಿಗೆ ಒದಗುವ ಪ್ರಾಥಮಿಕ ಅನುಭವಗಳನ್ನು ಮೀರಿರುತ್ತವೆ ಎನ್ನುತ್ತಾನೆ.. ಇಂದಿನ ಶಿಕ್ಷಣ ಪದ್ಧತಿಯಲ್ಲೂ ಈ ಕ್ರಮವನ್ನು ಅನುಸರಿಸುವುದನ್ನು ಕಾಣಬಹುದು.
ಬೇರೆ ಕೆಲವರಂತೆ ಮೆಕರೆಂಕೋಗೆ ಶಿಕ್ಷಣವೇ ಎಲ್ಲ ಅಲ್ಲ. ಶಿಕ್ಷಣವು ವ್ಯಕ್ತಿಯಲ್ಲಿ ಸೂಕ್ತ ಜೀವನ ಶೈಲಿಯನ್ನುಂಟು ಮಾಡುತ್ತದೆ. ಶಿಕ್ಷಣವು ಬದುಕಿಗೆ ಬೇಕಾದ ಕೌಶಲಗಳನ್ನು ವ್ಯಕ್ತಿಗೆ ನೀಡುತ್ತದೆ. ಆದುದರಿಂದ ಶಿಕ್ಷಣ ಮುಖ್ಯ. ಅವನ ಶಿಕ್ಷಣ ತತ್ವಗಳು ಇಂದಿನ ಆಚರಣೆಗಳ ಬಗ್ಗೆ ಆಳವಾದ ಪ್ರಭಾವ ಬೀರಿವೆ. ಇಂದಿಗೂ ಶಿಕ್ಷಣದ ವಿದ್ಯಾರ್ಥಿಗಳು ಮೆಕರೆಂಕೋನ ಕೃತಿಗಳಲ್ಲಿ ಅಮೂಲ್ಯ ವಿಚಾರಗಳನ್ನು ಕಾಣಬಹುದು.
[ಮೆಕರೆಂಕೊನ ಬಾಳ್ವೆಯ ದರ್ಶನ, ಮೆಕರೆಂಕೋನ ಜೀವನ ಮತ್ತು ತತ್ವಗಳ ಬಗ್ಗೆ ಜಿ ಎನ್ ಫಿಲೊನೊವ್ ಇವರ ಲೇಖನ, ತೆರ್ಜೆ ಹಾಲ್ವೊರ್ಸೆನ್ ಇವರ ಲೇಖನ, ಯುನೆಸ್ಕೊ ಪ್ರಕಟಣೆ  ಮತ್ತು ವಿಕಿಪೀಡಿಯಾಗಳನ್ನು ಆಧರಿಸಿದೆ]


 

Monday 5 June 2017

ಶಿಶುಪಾಲನೆ ಹೇಗೆ: ಎ ಎಸ್ ನೀಲ್ - ದೃಷ್ಟಿ ಸುಕುಮಾರಗೌಡರಿಂದ ಕನ್ನಡಾವತರಣ

ಶಿಶುಪಾಲನೆ ಹೇಗೆ:  ಎ ಎಸ್ ನೀಲ್ - ದೃಷ್ಟಿ
ಸುಕುಮಾರಗೌಡರಿಂದ ಕನ್ನಡಾವತರಣ                                                            
ತಮ್ಮ ಮಗುವಿಗೆ ಯಾವ ವಿಷಯಗಳನ್ನು ಹೇಗೆ ಕಲಿಸಿದರೆ ಮುಂದೆ ಉತ್ತಮ ನಾಗರೀಕರಾಗಿ ಬಾಳಬಹುದು? ಉತ್ತಮ ಗಳಿಕೆ ಅವನಿಗೆ ಸಿಗಬಹುದು? ಅವನು ಸ್ವಲ್ಪವೂ ದುಃಖವಿಲ್ಲದಂತೆ ನಿರಂತರ ಸುಖಕ್ಕೆ ಭಾಜನವಾಗಬಹುದು? – ಇತ್ಯಾದಿ ಪ್ರಶ್ನೆಗಳು ಪ್ರತಿಯೊಬ್ಬ ತಂದೆ ತಾಯಿಗೆ ತಮ್ಮ ಮಗುವನ್ನು ಶಾಲೆಗೆ ಸೇರಿಸುವ ಹೊತ್ತು ಕೊರೆಯುವುವು. ಇವುಗಳಿಗೆ ಉತ್ತರಗಳು ವಿಭಿನ್ನರೀತಿಯಾವು.
          ಇಲ್ಲಿ ಎ ಎಸ್ ನೀಲ್ ಎಂಬ ಶಿಕ್ಷಣ ತಜ್ಞ ಯಾವ ಕಾರಣಕ್ಕೂ ಶಿಕ್ಷೆ ನೀಡದೆ ಮಕ್ಕಳಿಗೆ ಶಿಕ್ಷಣ ನೀಡಬಹುದು ಮತ್ತು ಇದರಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತರಾಗಿ ಮಕ್ಕಳು ಬೆಳೆಯುವರೆಂದು ಪ್ರತಿಪಾದಿಸಿರುವುದನ್ನು ಕುರಿತು ಬರೆಯುತ್ತಿದ್ದೇನೆ. ಶಾಲೆಯೊಂದನ್ನು ಸ್ಥಾಪಿಸಿ, ಶಿಕ್ಷೆರಹಿತ ಶಿಕ್ಷಣವನ್ನು ಮಾಡಿ ತೋರಿಸಿದ ಮಹಾತ್ಮನೀತ. ಅನುಭವಗಳ ಆಧಾರದಲ್ಲಿ Summerhill – A Radical Approach to Child Rearing ಎಂಬ ಪುಸ್ತಕವನ್ನು ಬರೆದು ಈ ರೀತಿಯ ಶಿಕ್ಷಣಪದ್ಧತಿಯ ಲಾಭಗಳೇನು, ಶಿಕ್ಷೆ ನೀಡುವುದರಿಂದ ಆಗುವ ಅನಾಹುತಗಳೇನು ಎಂಬ ವಿಷಯಗಳನ್ನು ವಿವರವಾಗಿ ಚರ್ಚಿಸಿದ್ದಾನೆ. ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಶಿಕ್ಷೆ ಕೊಡುವುದೇ ಇಂದಿನ ಸಾಮಾಜಿಕ ಸಮಸ್ಯೆಗಳಿಗೆಲ್ಲ ಮೂಲ ಕಾರಣವೆಂಬುದು ಇವನ ಅಭಿಪ್ರಾಯ. ಇದೊಂದು ಆತ್ಮಚರಿತ್ರಾತ್ಮಕ ಅಂಶಗಳನ್ನೊಳಗೊಂಡ ಶಿಕ್ಷಣ ಗಾಥೆ. ಉದಾಹರಣೆಗೆ “ನಾನು ಯುವ ಶಿಕ್ಷಕನಾಗಿದ್ದಾಗ ಮಕ್ಕಳಿಗೆ ಏಟು ಕೊಡುತ್ತಿದ್ದೆನು.... ನನ್ನಲ್ಲಿದ್ದ ಅಹಂಭಾವಕ್ಕೆ ಘಾಸಿಯಾದಾಗ ನಾನು ಸಹಿಸಲಾರದೆ ಇದ್ದೆನು” (148) ಎಂದು ತನ್ನ ಅನುಭವದ ಮಾತನ್ನು ನಿರ್ಭಿಡೆಯಿಂದ ಹೇಳಿದ್ದಾನೆ. ಎಲ್ಲರಿಗೂ ಶಿಕ್ಷಣ, ಹೊರೆರಹಿತ ಶಿಕ್ಷಣ, ಅವರವರ ವೇಗದಲ್ಲಿ ಕಲಿಯುವಂತೆ ಶಿಕ್ಷಣ, ಸಂತಸ ಕಲಿಕೆ, ಶಿಕ್ಷೆ ಇಲ್ಲದೆ ಶಿಕ್ಷಣ - ಇಂತಹ ಧ್ಯೇಯವಾಕ್ಯಗಳು ದೇಶದ ಉದ್ದಗಲದಲ್ಲೂ ಕೇಳಿಬರುತ್ತವೆ. ಆದರೆ ಇವೆಲ್ಲ ವನ್ನು ಶ್ರದ್ಧೆಯಿಂದ ಅನುಷ್ಠಾನಗೊಳಿಸಿದ ಶಾಲೆ ಕಾಣಸಿಗದು. ಎ ಎಸ್ ನೀಲ್ ಇವನ ಸಮ್ಮರ್ ಹಿಲ್ ಶಾಲೆ ಇಂತಹ ಆದರ್ಶವನ್ನು ವಾಸ್ತವವನ್ನಾಗಿಸಿ ಜಯಗಳಿಸಿರುವುದನ್ನು ಅವನ ಈ ಬರಹದಲ್ಲಿ ಕಾಣಬಹುದು. ಪ್ರತಿಯೊಂದು ಮಗುವಿನ ವರ್ತನೆಯ ಹಿಂದೆ ಇರುವ ಕಾರಣಗಳನ್ನು ಆ ಮಗುವಿನ ಪೂರ್ವಾನುಭವಗಳನ್ನಾಧರಿಸಿ ಮನೋವಿಶ್ಲೇಷಣೆ ನಡೆಸಿ ತನ್ನ ಶಾಲೆಯಲ್ಲಿರುವ ಪದ್ಧತಿಗಳು ಹೇಗೆ ಉಚಿತವೆಂಬುದನ್ನು ಅವನು ವಿವರಿಸುವುದು ಮನೋಜ್ಞವಾಗಿದೆ.
          ಹೀಗಿದ್ದರೂ ಇದು ಮನೋವೈಜ್ಞಾನಿಕನೊಬ್ಬ ಪ್ರಾಣಿಗಳ ಮೇಲೆ ಪ್ರಯೋಗ ಮಾಡಿ ಅಲ್ಲಿ ದೊರಕಿದ ಫಲಿತಗಳನ್ನು ಮಾನವ ಶಿಶುಗಳಿಗೂ ವಿಸ್ತರಿಸಿದಂತಲ್ಲ.  ತಾನೇ ಸ್ಥಾಪಿಸಿದ ಶಾಲೆಯೊಂದರಲ್ಲಿ ಕಲಿತ  ಮಕ್ಕಳ ನಡವಳಿಕೆಗಳನ್ನುಇವನು ಅಧ್ಯಯನ ಮಾಡಿದ. ಮತ್ತು ಈ ಅಧ್ಯಯನದಿಂದ ಹೊರಹೊಮ್ಮಿದ ವಿಚಾರಗಳ ಪ್ರಾಮಾಣಿಕ ಕಥನವೇ Summerhill – A Radical Approach to Child Rearing ಎಂಬ ಗ್ರಂಥ. ಯಾವುದೇ ನಿರ್ಬಂಧಗಳಿಗೊಳಗಾಗದೆ ಸ್ವತಂತ್ರ ನೆಲೆಯಲ್ಲಿ ಬೆಳೆದ ಮಕ್ಕಳು ಹೇಗೆ ನಿರ್ಭೀತರೂ ಸಮಾಜಮುಖಿಗಳೂ ಆಗಿ ಆರೋಗ್ಯಕರ ಸಮಾಜದ ಸದಸ್ಯರಾಗಬಲ್ಲರು ಎಂಬದನ್ನು ಇಲ್ಲಿ ಘನತರವಾಗಿ ಪ್ರತಿಪಾದಿಸಿದ್ದಾನೆ. ಸ್ವಂತ ಅನುಭವಗಳ ಆಧಾರದಲ್ಲಿ  ವಿಶ್ಲೇಷಣೆ ನಡೆಸುತ್ತಾ ಈ ವಿಚಾರಗಳನ್ನುಪ್ರಸ್ತುತ ಪಡಿಸಿರುವುದು ಕೃತಿಕಾರನ ವೈಶಿಷ್ಟ್ಯ. ಇವನ ಕೃತಿಯಲ್ಲಿ ಎರಡು ಭಾಗಳನ್ನು ಗುರುತಿಸಬಹುದು. ಮೊದಲನೆಯದಾಗಿ ಇವನು ಸ್ಥಾಪಿಸಿದ ಸಮ್ಮರ್ ಹಿಲ್ ಎಂಬ ಶಾಲೆಯಲ್ಲಿ ಮಕ್ಕಳ ಶಿಕ್ಷಣ ಮತ್ತು ಶಿಸ್ತಿಗೆ ಸೂಕ್ತ ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತಾನೆ. ಮತ್ತು ಅನಂತರ ಸಮ್ಮರ್ ಹಿಲ್-ನಲ್ಲಿ ಅನುಸರಿಸಿದ ಕ್ರಮಗಳ ಮನೋವೈಜ್ಞಾನಿಕ ವಿಶ್ಲೇಷಣೆಯಾಗಿ ಲೈಂಗಿಕತೆ, ರತಿ, ಧರ್ಮ ಮತ್ತು ನೀತಿ ಇವುಗಳಲ್ಲಿ ಸ್ವಾತಂತ್ರ್ಯವಿಲ್ಲದಿರುವುದು ಹೇಗೆ ಸಮಸ್ಯಾತ್ಮಕ ನಡತೆಗೆ ಕಾರಣವಾಗುತ್ತದೆ ಎಂಬುದನ್ನು ವಿವರವಾಗಿ ವಿವರಿಸುತ್ತಾನೆ. ಇದನ್ನು ಪ್ರಯೋಗಾಧಾರಿತ ಎಂದರೆ ಆಂಶಿಕ ಸತ್ಯವಾಗುವುದು. ಅನುಭವಾಧಾರಿತ ಅನ್ನುವುದೇ ಸೂಕ್ತವಾದಿತು. ಅನುಭವಗಳ ಆಧಾರದಲ್ಲಿ ಮನೋ ವೈಜ್ಞಾನಿಕ ಅನುಮಾನಗಳನ್ನು ಕೈಗೊಂಡು ಶಿಕ್ಷೆಯ ನಿರರ್ಥಕತೆಯನ್ನ ನಿರೂಪಿಸುವುದು ಇಲ್ಲಿಯ ಪದ್ಧತಿ. ಆದ್ದರಿಂದಲೇ ಇಲ್ಲಿಯ ನಿರೂಪಣೆಗಳು ಭೌತಿಕ ವಿಜ್ಞಾನದ ಸಿದ್ಧಾಂತಗಳಂತಲ್ಲದೆ ಅನುಭವಜನ್ಯ ಘನಸತ್ಯಗಳಾಗಿ ಗೋಚರಿಸುವುವು. ಇಲ್ಲಿಯ ವಿವರಣೆಗಳಲ್ಲಿ ವ್ಯಕ್ತಿಯೊಬ್ಬ(ಕೃತಿಕಾರ) ಉತ್ತಮಿಕೆಯ ಸಾಧನೆಯಲ್ಲಿ ಮೇಲೇರುತ್ತಿರುವುದು ಓದುಗನ ಅನುಭವಕ್ಕೆ ಬರುವುದು.ಆದರೆ ಇದು ‘ಧಾರ್ಮಿಕ’ವಲ್ಲ;ಭಯದಿಂದ ತಾನು ಕಲ್ಪಿಸಿದ ಧರ್ಮವನ್ನು ಪಾಲಿಸುವುದು ಇವನಿಗೆ ಸೇರದು.”ಗೊಡ್ಡು ನಂಬಿಕೆಯ ಚಿರಂತನ ಬದುಕನ್ನು ಮರೆತು, ತಮ್ಮೆದುರಿಗೆ ಇರುವ ಪ್ರಸ್ತುತ ಬದುಕನ್ನು ನಂಬುವಂತಿರಬೇಕು”(211) ಎಂಬುದು ಇವನು ನಂಬಿದ ಸಿದ್ಧಾಂತ. ನನಗಂತೂ ಈ ಕೃತಿ ಲೇಖಕ ಮಕ್ಕಳಿಗೆ ಶಿಕ್ಷಣ ನೀಡುತ್ತಾ ತನ್ನತನವನ್ನು ಕಂಡುಕೊಳ್ಳುವ ನಿರಂತರ ಪ್ರಕ್ರಿಯೆಯ ಚಿತ್ರಣವೆನಿಸುತ್ತದೆ. ಸುಕುಮಾರಗೌಡರು ಹೇಳುವಂತೆ “ಕೃತಿಕಾರನ ಆಂತರ್ಯದ ದರ್ಶನವಾದಂತೆ ನಾವೂ ನಮ್ಮ ಆಂತರ್ಯದ ಶೋಧನೆಯಲ್ಲಿ ತೊಡಗುವೆವು” (X). ನಗ್ನತೆ ಇತ್ಯಾದಿಗಳ ಬಗ್ಗೆ ಇವನ ವಿವರಣೆ ಹರ್ಮನ್ ಹೆಸ್ಸನ ಸಿದ್ಧಾರ್ಥ ಕಾದಂಬರಿಯಲ್ಲಿ ಸಿದ್ಧಾರ್ಥನು ತನ್ನ ಸಾಧನೆಯ ಅಂತಿಮ ಘಟ್ಟದಲ್ಲಿ ವೇಶ್ಯಾವಾಟಿಕೆಗಳಿಗೆ ಭೇಟಿ ನೀಡಿ ಎಲ್ಲವನ್ನೂ ಸಹಜವಾಗಿ ಸ್ವೀಕರಿಸುವ ಸಮಚಿತ್ತತೆಗೆ ಸಲ್ಲುವುದು ನೆನಪಾಗುತ್ತದೆ.
ಸಮ್ಮರ್ ಹಿಲ್ ಎಂಬುದು 1921ರಲ್ಲಿ ಎ ಎಸ್ ನೀಲ್  ಲಂಡನ್ನಿನಿಂದ ನೂರು ಕಿಲೋ ಮೀಟರ್ ದೂರದಲ್ಲಿ ಸ್ಥಾಪಿಸಿದ ಪ್ರತಿಮಗುವೂ ಸ್ವನಿಯಂತ್ರಣಕ್ಕೊಳಗಾಗಿ ತನಗೆ ಬೇಕಾದ್ದನ್ನು ಕಲಿಯುವ, ತನಗೆ ಇಷ್ಟಬಂದಂತೆ ವರ್ತಿಸುವ ಸಂಪೂರ್ಣ ಸ್ವಾತಂತ್ರ್ಯದ ವ್ಯವಸ್ಥೈಯುಳ್ಳ ಪ್ರಯೋಗಾತ್ಮಕ ವಸತಿ ಶಾಲೆ. ಐದರಿಂದ ಹದಿನಾರುವರ್ಷ ಪ್ರಾಯದ 25ಹುಡುಗರು ಮತ್ತು 20 ಹುಡುಗಿಯರು ಈ ಶಾಲೆಗೆ ಸೇರಿದರು.  ಇವರನ್ನು ಮೂರು ಗುಂಪುಗಳನ್ನಾಗಿ ಮಾಡಿ ಅವರಿಗೆ ಇಷ್ಟವಾದುದನ್ನು ಕಲಿಯುವಂತೆ ಏರ್ಪಡಿಸಿದ್ದನು. ಯಾವುದೇ ಪರೀಕ್ಷೆಗೆ ಮಕ್ಕಳನ್ನು ತಯಾರು ಮಾಡುವುದು ಶಾಲೆಯ ಉದ್ದೇಶವಲ್ಲ; ಆದರೆ ಹಾಗೆ ತಯಾರಾಗಬೇಕೆಂದು ಒಬ್ಬ(ಳು) ಇಚ್ಛಿಸಿದರೆ ಹಾಗೆ ಮಾಡಬಹುದಿತ್ತು ಶಾಲೆಯ ಆಡಳಿತ ಮಕ್ಕಳು ಅನುಸರಿಸಬೇಕಾದ ಯಾವ ನಿಯಮವನ್ನೂ ರೂಪಿಸಿ ಮಕ್ಕಳ ಮೇಲೆ ಹೇರುವುದಿಲ್ಲ. ಮಕ್ಕಳು, ಅಧ್ಯಾಪಕರು ಮತ್ತು ಇತರ ಸಿಬ್ಬಂದಿ ಸೇರಿದ ಸಾಮಾನ್ಯ ಸಭೆ ಆಗಿಂದಾಗ ಸೇರಿ ಎಲ್ಲರೂ ಒಪ್ಪುವಂತಹ ನಿಯಮಗಳನ್ನು ರೂಪಿಸಿಕೊಳ್ಳುತ್ತಿದ್ದರು. ಶಾಲೆಯ ದೈನಂದಿನ ಕಾರ್ಯಕ್ರಮ, ವೇಳಾಪಟ್ಟಿ ಎಲ್ಲವೂ ಹೀಗೇ ಸಿದ್ಧವಾಗುವುವು. ಒಬ್ಬ ವಿದ್ಯಾರ್ಥಿಗಿರುವಷ್ಟೇ ಹಕ್ಕು ನೀಲ್-ಗೂ ಇರುವುದು. ಸಮಾಜದಲ್ಲಿ ಭ್ರಷ್ಟಾಚಾರ, ಅಪರಾಧಗಳು ಇಂತಹವು ಉಂಟಾಗುವುದು ಎಳವೆಯಲ್ಲಿ ವ್ಯಕ್ತಿಗಳ ಸ್ವಾತಂತ್ರ್ಯಹರಣ ಮಾಡುವುದರಿಂದಲೇ ಎಂಬುದು ಲೇಖಕರ ಅಭಿಪ್ರಾಯ; ಆದ್ದರಿಂದಲೇ ಸಂಪೂರ್ಣ ಸ್ವಾತಂತ್ರ್ಯವಿರುವ ವಾತಾವರಣದಲ್ಲಿ ಮಕ್ಕಳಿಗೆ ಕಲಿಸುವುದು ಈ ಶಾಲೆಯ ವೈಶಿಷ್ಟ್ಯ. ಇಲ್ಲಿಂದ ಕಲಿತು ಹೊರಹೋದ ಮಕ್ಕಳು ಯಾವುದೇ ವೃತ್ತಿಯನ್ನು (ಉದಾ.ಕೆಮರಾಮನ್) ದಕ್ಷವಾಗಿ ನಿರ್ವಹಿಸಿದ್ದನ್ನು,  ಕೆಲವರು ಸಮಾಜದಲ್ಲಿ ಉತ್ತಮ ಸೇವಾಮನೋಭಾವದವರಾಗಿ ಉನ್ನತ ಕಾರ್ಯಗಳಲ್ಲಿ ತೊಡಗಿ ಯಶಸ್ಸು ಗಳಿಸಿದ್ದನ್ನು ನೀಲ್  ಹೇಳುತ್ತಾರೆ. ಶಾಲೆಯ ರಚನೆ, ಅಲ್ಲಿಯ ಕ್ರಮಗಳ ವಿವರಣೆ, ವಿದ್ಯಾರ್ಥಿಗಳಲ್ಲಿರುವ ಅನಪೇಕ್ಷಣೀಯ ನಡತೆಗಳನ್ನು ನೇರ್ಪುಗೊಳಿಸುವುದು ನೀಲ್ ಇವರ ವಿಧಾನಗಳಾಗಿದ್ದು ಇವುಗಳು ಮೊದಲ ಪುಟಗಳಲ್ಲಿ ಸ್ಪಷ್ಟವಾಗಿ ನಿರೂಪಿತವಾಗಿವೆ.
ಸ್ವನಿಯಂತ್ರಿತ ಮಗು ಎಂಬುದು ಇವನ ಮೌಲಿಕ ಪರಿಕಲ್ಪನೆ . ಅಂದರೆ ಮಗುವಿಗೆ ಹೀಗೆ ಮಾಡು, ಹೀಗೆ ಮಾಡಬೇಡ ಎಂದು ವಿಧಿಸುವ (ಇದು ಸರಿಯಾದ ರೀತಿಯಲ್ಲ) ಬದಲು ಅದನ್ನು ಸ್ವತಂತ್ರವಾಗಿ ಬಿಟ್ಟರೆ ತಾನು ಸರಿಯಾದ ರೀತಿಯನ್ನೇ ಅನುಸರಿಸುತ್ತದೆ ಎಂಬುದು ಮೂಲಭೂತ ಕಲ್ಪನೆ. ಪ್ರತಿಯೊಂದು ಕಾರ್ಯವನ್ನು ಹೀಗೆ ಮಾಡಲು ಬಿಟ್ಟರೆ ಮೊದಮೊದಲು ನಷ್ಟವಾಗುವಂತಹ ಕೆಲಸಗಳನ್ನು ಮಾಡಿದರೂ ಅನಂತರ ಸೂಕ್ತವಾದುದನ್ನೇ ಆಯ್ಕೆ ಮಾಡಿಮಾಡುತ್ತದೆ ಎಂಬುದು ಕೃತಿಕಾರನ ಮೂಲ ಗ್ರಹಿಕೆ. ಈ  ರೀತಿಗೆ ಕೃತಿಯಲ್ಲಿ ಹಲವು ನಿದರ್ಶನಗಳಿವೆ. (ಉದಾ. 160, 171, 176). ಸಮ್ಮರ್ ಹಿಲ್ಲಿನಲ್ಲಿ ಪೂರ್ಣತಂತ್ರಸ್ವಾತಂತ್ರವಿದ್ದರೂ ಎಲ್ಲ ಮಕ್ಕಳೂ ಸ್ವನಿಯಂತ್ರಿತರಾಗಿದ್ದು ಶಾಲೆಯಲ್ಲಿ ಉತ್ತಮ ಶಿಸ್ತನ್ನು ಅನುಸರಿಸುತ್ತಾರೆ.
ಬೇರೆ ಶಾಲೆಗಳಿಂದ ಈ ಶಾಲೆಗೆ ವರ್ಗಾವಣೆಗೊಂಡು ಬಂದ ಮಕ್ಕಳು ಇಲ್ಲಿಗೆ ಹೊಂದಿಕೊಳ್ಳಲು ಸಮಯ ಹಿಡಿಯುತ್ತದೆ. ಅಲ್ಲದೆ ಮನೆಯ ವಾತಾವರಣದಿಂದಾಗಿ ಈ ಶಾಲೆಗೆ ಬಂದ ಮಕ್ಕಳಲ್ಲಿ ಕೂಡ ಅನಪೇಕ್ಷಿತ ನಡವಳಿಕೆಗಳು ಕಂಡುಬರುತ್ತವೆ. ಇವರ ಸಮಸ್ಯೆಗಳ ನಿವಾರಣೆಗಾಗಿ PLಗಳು (ಖಾಸಗಿ ಪಾಠಗಳು) ಈ ಶಾಲೆಯ ಇನ್ನೊಂದು ವೈ ಶಿಷ್ಟ್ಯ. ಇಂತಹ ಮಕ್ಕಳನ್ನು ಎಕ್ಕಟಿ ಕರೆದು ಒಂದು ರೀತಿಯ ಸಮಾಲೋಚನೆ ನೀಡುವುದು ಇಂತಹ PLಗಳ ಉದ್ದೇಶ. ಈ ಎಲ್ಲ ವಿವರಗಳು ಪುಸ್ತಕದ ಮೊದಲ ಪುಟಗಳಲ್ಲಿ ಬಂದಿವೆ.
ಈ ಶಾಲೆಯಲ್ಲಿ ಪಡೆದ ಅನುಭವಗಳ ಆಧಾರದಲ್ಲಿ ಶಿಶು ಪಾಲನೆಯ ಮೂಲತತ್ವಗಳನ್ನುಅನಂತರ ಇವನು ನಿರೂಪಿಸುತ್ತಾನೆ. “ಮಗು[ವಿಗೆ] ಮಾನಸಿಕ ಹಾಗೂ ದೈಹಿಕವಾಗಿ ಬಾಹ್ಯ ಒತ್ತಾಸೆಗೆ ಒಳಗಾಗದೆ, ಬದುಕಲು ಸ್ವಾತಂತ್ರ್ಯ” ಇರುವಂತೆ ಶಿಶು ಪಾಲನೆ ಮಾಡಬೇಕು. ಅಂದರೆ ತನಗೆ ಹಸಿವಾದಾಗ ತಿನ್ನುವ ಸ್ವಾತಂತ್ರ್ಯ, ಅಗತ್ಯವೆನಿಸಿದಾಗ ಸ್ವಚ್ಛವಾಗಿರಲು ಸ್ವಾತಂತ್ರ್ಯ [ಇದ್ದು] ಗದರಿಕೆ ಬೆದರಿಕೆ ಏಟಿಗೆ ಒಳಗಾಗದೆ ಸದಾ ಪ್ರೀತಿ ಮತ್ತು ರಕ್ಷಣೆಗೆ ಒಳಗಾಗಿರು”ವಂತೆ ನೋಡಿಕೊಳ್ಳಬೇಕು(91). “ಇಂದು ನನ್ನ ಅನುಭವದಿಂದ ಹೇಳವುದಿದ್ದರೆ ಶಿಕ್ಷೆ ಎನ್ನುವುದು ಅನಗತ್ಯ. ನಾನು ಮಗುವನ್ನು ಎಂದೂ ಶಿಕ್ಷಿಸುವುದಿಲ್ಲ;ಶಿಕ್ಷಿಸಬೇಕೆಂಬ ಬಯಕೆಯೂ ಇರದು” (146). ಲೈಂಗಿಕ ಪ್ರವೃತ್ತಿ, ಧರ್ಮ ಮತ್ತು ನೀತಿಯ ಅನುಸರಣೆ, ಇಂತಹವುಗಳಲ್ಲಿ ಹೇಗೆ ಸ್ವಾತಂತ್ರ್ಯವಿರಬೇಕು ಆದರೆ ಸ್ವೇಚ್ಛಾಚಾರವಿರಬಾರದು ಎಂಬುದನ್ನು ತನ್ನ ಅನುಭವದ ನಿದರ್ಶನಗಳನ್ನು ಉದಾಹರಿಸತ್ತಾ ನಿರೂಪಿಸಿದ್ದಾನೆ. ಹೀಗೆ ಮಾಡಲು ಎದುರಾಗುವ ಮಕ್ಕಳ ಸಮಸ್ಯೆಗಳೇನು ಪಾಲಕರ ಸಮಸ್ಯೆಗಳಾವುವು ಮತ್ತು ಇವುಗಳನ್ನು ಮೀರುವುದು ಹೇಗೆಂಬ ಬಗ್ಗೆ ಸೂಚನೆಗಳನ್ನು ನೀಡಿದ್ದಾನೆ.
ಶಿಕ್ಷಣ ತಜ್ಞ ನೀಲ್ ಇವ ಕೃತಿಯನ್ನು ಡಾ ಸಕುಮಾರ ಗೌಡ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ರಾಷ್ಟ್ರದ ಉದಾತ್ತ ಶಿಕ್ಷಣತಜ್ಞರಲ್ಲೊಬ್ಬರಾಗಿದ್ದರೂ ಮಕ್ಕಳಹಿತಾಸಕ್ತಿ ಉಳ್ಳವರಾಗಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಮಕ್ಕಳಮಂಟಪವೊಂದನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಂತಹವರು ನೀಲ್ ಇವನ ಪುಸ್ತಕವನ್ನು ಅನುವಾದಿಸಿರುವುದು ಸಹಜವೂ ಉಪಯುಕ್ತವೂ ಆಗಿದೆ. ಅನುವಾದಗಳಲ್ಲಿ ಕೃತಿನಿಷ್ಠ, ವಸ್ತು ನಿಷ್ಠ ಇತ್ಯಾದಿಯಾಗಿ ವರ್ಗಗಳನ್ನು ಕಲ್ಪಿಸುವುದಿದೆ. ಗೌಡರ ಅನುವಾದವನ್ನು ಓದುಗನಿಷ್ಠ ಎಂದು ವರ್ಗೀಕರಿಸಬಹುದು. ಕೃತಿಯ ಓದುಗನಿಗೆ ಕೃತಿ ಎಲ್ಲಿಂದಲೋ ಭಾಷಾಂತರವಾಗಿ ಬಂದುದು ಎಂದು ಭಾಸವಾಗದೆ ಒಂದು ಸ್ವತಂತ್ರ ಸೃಜನಶಿಲ ಕೃತಿ ಎಂದೇ ಕಾಣಿಸುತ್ತದೆ. ಆದ್ದರಿಂದ ಆತ್ಮೀಯವಾಗುತ್ತದೆ.
          ತಮ್ಮ ಬರಹವನ್ನು ಓದುಗಸ್ನೇಹಿಯಾಗಿಸಲು ಲೇಖಕರು ಇತರ ಭಾಷಾ ಪದಗಳನ್ನು ಮಧ್ಯೆ ಮಧ್ಯೆ ಬಳಸಲು ಯಾವುದೇ ಹಿಂಜರಿಕೆ ತೋರುವುದಿಲ್ಲ. “ಡಾಕ್ಟರರಾಗಿ “   “ ಯಾ ಫಸ್ಟ್ ಕ್ಲಾಸ್ ಪೋಲೀಸರಾಗಿ”( 23) “ರೆಡ್ ಇಂಡಿಯನ್” ( 63) “ಬಾಜಿಸುವೆನು “  (ಈ ಪದ ಹಿಂದೂಸ್ತಾನಿ 62) ಇತ್ಯಾದಿ ಪದಗಳನ್ನು ಧಾರಾಳವಾಗಿ ಬಳಸಿದ್ದಾರೆ. “ಒಡೆದುದಕ್ಕೆ ಅವನಿಗೆ ಬಾರಿಸಿದಳು” (175) ಎಂಬಂತೆ ಆಡುಮಾತನ್ನು ಸಮರ್ಥವಾಗಿ ಉಪಯೋಗಿಸಿದ್ದಾರೆ. ಇಲ್ಲಿ ಹೊಡೆದಳು, ಏಟುಕೊಟ್ಟಳು ಇತ್ಯಾದಿಯಾಗಿ ಬಳಸಿದ್ದರೆ ಉತ್ತಮ ಪರಿಣಾಮವಾಗುತ್ತಿರಲಿಲ್ಲ. “ಗರೀಬಳೊಬ್ಬಳಿಗೆ ಆ ಸೌಲಭ್ಯವಿರದು”( 207) ಇಲ್ಲಿ ಕನ್ನಡದ ಬಡವಳು ಎಂಬುದಕ್ಕಿಂತ ಗರೀಬಳು ಎಂಬುದು ವ್ಯಕ್ತಿಯ ಬಡತನದ ಚಿತ್ರವನ್ನು ಅದ್ಭುತವಾಗಿಸಿದೆ. ತಿಳಿಗೇಡಿ ಎಂಭರ್ಥದ ಮದಡ ಎಂಬ ಪದ ಅಪುರೂಪದ್ದಾದರೂ   “ಮದಡನೋರ್ವನು ನನ್ನ ನಿಲುವನ್ನು ಒಪ್ಪಲಾರನು?”( 25) ಎಂಬಂತಹ ವಾಕ್ಯದಲ್ಲಿ ಪದರಚನೆಯೇ ಅರ್ಥಾಭಿನಯ ಮಾಡುತ್ತದೆ. “ಸ್ವಾಸ್ಥ್ಯ ಹಾಗೂ ಸ್ವಾತಂತ್ರ್ಯ ಮಕ್ಕಳು”, “ಮಕ್ಕಳನ್ನು ಸ್ವಾಸ್ಥ್ಯಚಿತ್ತರನ್ನಾಗಿ ಮಾಡಲು”(213) – ಇಂತಹಹ ಕಡೆಗಳಲ್ಲಿ ಸ್ವಾಸ್ಥ್ಯ, ಸ್ವಾತಂತ್ರ್ಯ ಎಂಬ ನಾಮಪದಗಳ ಬದಲು ಸ್ವಸ್ಥ, ಸ್ವತಂತ್ರ ಎಂಬ ಗುಣವಿಶೇಷಣಗಳನ್ನು ಬಳಸುವುದು ಹೆಚ್ಚು ಉಚಿತವಾಗಬಹುದು.
ಅನುವಾದಕರು ಕೃತಿಯಲ್ಲಿರುವ ಮುಖ್ಯಾಂಶಗಳನ್ನು ನೀಲ್-ನ ವಿಚಾರಗಳು ಎಂಬ ಉಪಶೀರ್ಷಿಕೆಯಡಿ ಪ್ರಾರಂಭದಲ್ಲಿ ಪಟ್ಟಿ ಮಾಡಿದ್ದಾರೆ. ಇದು ಓದುಗರಿಗೆ ಉಪಯುಕ್ತ ಮಾರ್ಗದರ್ಶನ ನೀಡುತ್ತದೆ.
          ಇದೊಂದು ಅನುಭವಗಳ ಆಧಾರದಲ್ಲಿ ರೂಪುಗೊಂಡ ವಿಶಿಷ್ಟ ಕೃತಿ. ಇಲ್ಲಿರುವಂತೆಯೇ ಎಲ್ಲ ಶಿಕ್ಷಕರೂ ಮಾಡುತ್ತಾರೆಂದು ಯಾರೂ ನಿರೀಕ್ಷಿಸಲಾರರು. ಆದರೆ ಇದನ್ನು ಓದುವುದರಿಂದ ಶಿಕ್ಷಕರಿಗೆ ಮತ್ತು ಪೋಷಕರಿಗೆ ಸಿಗುವ ಹೊಳಹುಗಳು ಅವರ ಮನೋಧೋರಣೆಯನ್ನು ಬದಲಿಸಿ ಆರೋಗ್ಯಕರ ಶಿಕ್ಷಣದತ್ತ ಸಾಗಲು ಅನುವು ಮಾಡಿಕೊಡುವುದು. ಕನ್ನಡಿಗರಿಗೆ ಕೃತಿ ಕನ್ನಡದಲ್ಲಿ ಸಿಗುವಂತೆ ಮಾಡಿ ಸುಕುಮಾರಗೌಡರು ಕೃತಕೃತ್ಯರಾಗಿದ್ದಾರೆ.
                   **********************************************

                

Friday 20 January 2017

ರವೀಂದ್ರನಾಥ ಟ್ಯಾಗೋರರ ಜೀವನದ ಬಗ್ಗೆ ಒಂದು ಟಪ್ಪಣಿ





ರವೀಂದ್ರನಾಥ ಟ್ಯಾಗೋರರ ಜೀವನದ ಬಗ್ಗೆ ಒಂದು ಟಪ್ಪಣಿ


               ನೋಬೆಲ್ ಪಾರಿತೋಷಕ ಪಡೆದ ಪ್ರಥಮ ಭಾರತೀಯನೆಂದೂ, ಸಾಂಸ್ಕೃತಿಕ ಜಗತ್ತಿನಲ್ಲಿ ಭಾರತದ ಗರಿಮೆಯನ್ನು ಎತ್ತಿ ಹಿಡಿದ ಮಹನೀಯನೆಂದೂ ರಾಷ್ಟ್ರ ಹೆಮ್ಮೆ ಪಡುವ ವ್ಯಕ್ತಿ ರವೀಂದ್ರನಾಥ ಟ್ಯಾಗೋರರು. ಬಂಗಾಳದ ಬ್ರಾಹ್ಮಣ ಕಟುಂಬವೊಂದರಲ್ಲಿ ಹುಟ್ಟಿ ಅಂತರರಾಷ್ಟ್ರೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಭಾರತೀಯ ಸಮಾಜಕ್ಕೂ ಸಾಹಿತ್ಯಕ್ಕೂ ಕೊಡುಗೆಗಳನ್ನು ನೀಡಿದವರು ಇವರು.ಗೀತಾಂಜಲಿ, ನೋಬೆಲ್ ಬಹುಮಾನ, ಶಾಂತಿನಿಕೇತನ, ರವೀಂದ್ರನಾಥ ಟ್ಯಾಗೋರರು, ಗುರುದೇವ, ಜನಗಣಮನ – ಇವೆಲ್ಲ ನಮಗೆ ಪರ್ಯಾಯ ಪದಗಳಂತೆ ಕಾಣುತ್ತವೆ.
            ದೇವೇಂದ್ರನಾಥ ಟ್ಯಾಗೋರ್ ಮತ್ತು ಶಾರದಾ ದೇವಿಯರ ಮಗನಾಗಿ ಕ್ರಿ ಶ ಸಾವಿರದ ಎಂಟುನೂರ ಅರವತ್ತೊಂದರ ಮೇ ಆರರಂದು ಕೊಲ್ಕೊತ್ತಾದ ಜೋರಸೆಂಕೋ ಎಂಬಲ್ಲಿ ಹುಟ್ಟಿದವರು ರವೀಂದ್ರರು. ಇವರು ತಮ್ಮ ತಂದೆ ತಾಯಿಗಳಿಗೆ ಹದಿನಾಲ್ಕನೆಯ ಮಗು. ಕುಟುಂಬ ದೊಡ್ಡದಾಗಿತ್ತಾದ್ದರಿಂದ ತಾಯಿ ಶಾರದಾ ದೇವಿಯವರಿಗೆ ಹೆಚ್ಚಿನ ಜವಾಬ್ದಾರಿಗಳಿದ್ದು ಮಗನನ್ನು ನೋಡಿಕೊಳ್ಳಲು ಬಿಡುವೇ ಇರುತ್ತಿರಲಿಲ್ಲ. ಆದ್ದರಿಂದ ಮನೆಯ ನೌಕರರೇ ರವೀಂದ್ರನನ್ನು ನೋಡಿಕೊಳ್ಳು ವಂತಾಯಿತು. ಹೀಗೆ ಮುಂದೆ ಅಂತರರಾಷ್ಟ್ರೀಯ ಖ್ಯಾತಿ ಗಳಿಸಿದ ಈ ವ್ಯಕ್ತಿ ಬಾಲ್ಯದಲ್ಲಿ ತಂದೆತಾಯಿಗಳ ಅಥವ ಹತ್ತಿರದ ಸಂಬಂಧಿಕರ ಮುದ್ದು ಕಂಡವರಲ್ಲ. ಹಿರಿಯರು ಶ್ರೀಮಂತರಾದರೂ ಇವರು ಇರುತ್ತಿದ್ದುದು ಹೊರಕೋಣೆಯಲ್ಲಿ ಕೆಲಸದವರೊಡನೆ. ಅಣ್ಣ ಸೋಮೇಂದ್ರನಾಥ ಮತ್ತು ಅಕ್ಕನ ಮಗ ಸತ್ಯಪ್ರಸಾದ ಇವರೂ ರವೀಂದ್ರರ ಜೊತೆ ಬೆಳೆದರು.
            ಹೀಗಿದ್ದರೂ ರವೀಂದ್ರರು ತಮ್ಮ ಕುಟುಂಬದ ಹಿನ್ನೆಲೆಗೆ ತಕ್ಕ ವ್ಯಕ್ತಿಯಾಗಿಯೇ ರೂಪುಗೊಂಡರು. ತಂದೆ ದೇವೇಂದ್ರನಾಥರು ರಾಜಾರಾಮರಾಯ್ ಇವರು ಸ್ಥಾಪಿಸಿದ್ದ ಬ್ರಹ್ಮ ಸಮಾಜವನ್ನ ಪುನಶ್ಚೇತನಗೊಳಿಸಿದವರಲ್ಲಿ ಒಬ್ಬರು. ಉಪನಿಷತ್ತುಗಳಲ್ಲಿ ಅವರಿಗೆ ತೀವ್ರ ಆಸಕ್ತಿ ಮತ್ತು ವಿದ್ವತ್ತು ಇತ್ತು. ಶುದ್ಧಮತ್ತು ಸರಳ ಜೀವಿ. ಸುತ್ತಲಿನ ಜನರಿಂದ ಅವರು ಮಹರ್ಷಿ ಎಂಬ ಗೌರವಕ್ಕೂ ಪಾತ್ರರಾಗಿದ್ದರು. ತಾಯಿ ಶಾರದಾ ದೇವಿ ಧಾರ್ಮಿಕ ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದರು. ಹಿರಿಯ ಅಣ್ಣ ದ್ವಿಜೇಂದ್ರನಾಥರು  ಕಾವ್ಯ, ತತ್ವಶಾಸ್ತ್ರ, ಗಣಿತ, ಸಾಹಿತ್ಯಗಳಲ್ಲಿ ಸಾಕಷ್ಟು ಪರಿಣತ. ಎರಡನೆಯ ಅಣ್ಣ ಸತ್ಯೇಂದ್ರನಾಥ ಐಸಿಎಸ್ಸಿಗೆ ಆಯ್ಕೆಯಾದ ಪ್ರಥಮ ಭಾರತೀಯ. ದೇವೇಂದ್ರನಾಥರ ಐದನೆಯ ಮಗ ಜ್ಯೋತೀಂದ್ರನಾಥ ಒಬ್ಬ ಪ್ರತಿಭಾವಂತ ಚಿತ್ರಕಾರ, ಸಂಗೀತಗಾರ ಮತ್ತು ನಾಟಕಕಾರ. ಅವನ ಪತ್ನಿ ಕಾದಂಬರೀ ದೇವಿ ಟ್ಯಾಗೋರರ ಕುಟುಂಬದೊಳಗೆ ಬಂಗಾಳಿ ಸಾಹಿತ್ಯ, ನಾಟಕ, ಸಂಗೀತ ಮುಂತಾದ ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದರು. ರವೀಂದ್ರರ ಅಭಿರುಚಿ ರೂಪಿಸುವಲ್ಲಿ ಇವರದು ಮುಖ್ಯ ಪಾತ್ರ. ರವೀಂದ್ರ ಸೋದರಿ ಸ್ವರ್ಣಕುಮಾರಿ ಆಧುನಿಕ ಭಾರತೀಯ ಭಾಷೆಯೊಂದರಲ್ಲಿ ಬರೆಯಲು ಪ್ರಾರಂಭಿಸಿದ ಪ್ರಥಮ ಮಹಳಾ ಸಾಹಿತಿ. ಟ್ಯಾಗೋರ್ ಕುಟುಂಬದವರು ತಮ್ಮದೇ ಪತ್ರಿಕೆಯನ್ನೂ, ಕಾವ್ಯ ಕಮ್ಮಟಗಳನ್ನೂ ನಡೆಸುತ್ತಿದ್ದರು. ರವೀಂದ್ರನಾಥರು ಸಾಹಿತ್ಯ, ಶಿಕ್ಷಣ, ಸಂಗೀತ, ಚಿತ್ರಕಲೆಗಳಲ್ಲಿ ಪ್ರವೀಣರಾದುದು ಕುಟುಂಬ ಗೌರವಕ್ಕೆ ಗರಿಮೂಡಿದಂತಾಯಿತು.
            ರವೀಂದ್ರರು ಬಾಲ್ಯದಲ್ಲಿ ಓದಿದ ಶಾಲೆಗಳೆಂದರೆ ಕೊಲ್ಕೊತ್ತೆಯ ಓರಿಯಂಟಲ್ ಸೆಮಿನರಿ ಸ್ಕೂಲ್ ಮತ್ತು ಸಂತ ಸೇವಿಯರ್ ಸ್ಕೂಲ್, ಇಂಗ್ಲೆಂಡಿನ ಬ್ರೈಟನ್ ಪಟ್ಟಣದಲ್ಲಿನ ಶಾಲೆ ಮತ್ತು ಅನಂತರ ಲಂಡನ್ನಿನ ಯೂನಿವರ್ಸಿಟಿ ಕಾಲೇಜು. ಶಾಲಾ ಜೀವನ ಇವರಿಗೆಂದೂ ಹರ್ಷದಾಯಕವಾಗಿರಲಿಲ್ಲವಾದರೂ ಅಂತಹ ಸನ್ನಿವೇಶದಲ್ಲಿಯೇ ತನ್ನನ್ನು ತಾನು ನಿರ್ಮಿಸಿಕೊಳ್ಳುವ ಅಪುರೂಪದ ವ್ಯಕ್ತಿಯಾಗಿ ಬೆಳಗಿದರು. ಜೀವನವಿಡೀ ಅವರು ಓದಿದರು. ಆಸಕ್ತಿವಹಿಸಿ ಚಟುವಟಿಕೆಗಳಲ್ಲಿ ತೊಡಗಿದರು. ಅವರಿಗೆ ಮನೆಯಲ್ಲಿ ಪಾಠ ಕಲಿಸಲು ಖಾಸಗಿ ಅಧ್ಯಾಪಕರನ್ನು ಗೊತ್ತು ಮಾಡಿದ್ದರು. ಮನೆಯಲ್ಲಿ ಇವರು ಅಧ್ಯಯನ ಮಾಡಿದ ಕಾವ್ಯಗಳೆಂದರೆ ಮೇಘನಾದ ವಧ, ವಾಲ್ಮೀಕಿ ರಾಮಾಯಣ ಮತ್ತು ಅಮರುಶತಕ.
            ರವೀಂದ್ರರಿಗೆ ಹದಿನಾಲ್ಕು ವರ್ಷ ವಯಸ್ಸಿದ್ದಾಗ ಅವರ ತಾಯಿ ತೀರಿಕೊಂಡರು. ಅತ್ತಿಗೆ ಕಾದಂಬರಿ ದೇವಿ ತಾಯಿಯ ಸ್ಥಾನವನ್ನು ಸ್ವಲ್ಪಮಟ್ಟಿಗೆ ತುಂಬಿದರಾದರೂ ಅವರ ಒಂಟಿತನವನ್ನು ಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಾಗಲಿಲ್ಲ. ಕ್ರಿ ಶ 1883ರಲ್ಲಿ ಭವತಾರಿಣಿ ಎಂಬ ಹತ್ತು ವರ್ಷ ತುಂಬಿರದ ಹುಡುಗಿಯೊಡನೆ ಇವರ ವಿವಾಹವಾಯಿತು. ಮದುವೆಯನಂತರ ಇವರ ಹೆಸರನ್ನು ಮೃಣಾಲಿನಿ ಎಂದು ಬದಲಿಸಲಾಯಿತು. ರವೀಂದ್ರರ ವಿವಾಹದನಂತರ ಕ್ರಿ ಶ 1884ರಲ್ಲಿ ಕಾದಂಬರೀ ದೇವಿ ಅಫೀಮು ತಿಂದು ಆತ್ಮಹತ್ಯೆಮಾಡಿಕೊಂಡರು. ಇದು ಅವರಿಗೆ ಆಘಾತಕರವಾಯಿತು.
            ಮೃಣಾಲಿನಿ ಮತ್ತು ರವೀಂದ್ರರಿಗೆ ಮೂವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಾದರು. ಮಾಧುರೀಲತಾ ದೇವಿ ಅಥವ ಬೇಲಾ, ರಾಣಿ  ಅಥವ ರೇಣುಕಾ ಮತ್ತು ಮೀರಾ ದೇವಿ ಅಥವ ಅತಸಿ  – ಇವು ಹೆಣ್ಣು ಮಕ್ಕಳ ಹೆಸರುಗಳು. ರತೀಂದ್ರನಾಥ ಮತ್ತು ಸಮೀಂದ್ರನಾಥ ಎಂಬ ಇಬ್ಬರು ಗಂಡು ಮಕ್ಕಳು. ಮೃಣಾಲಿನಿ ತನ್ನ ಪತಿ ಮತ್ತು ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಸಾಹಿತ್ಯ ಮತ್ತು ಕಲೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಭಾಗವಹಿಸುತ್ತಾ ಪದದ ನಿಜವಾದ ಅರ್ಥದಲ್ಲಿ ಬಾಳಸಂಗಾತಿಯಾಗಿದ್ದರು. ಆದರೆ ಗುರುತು ಹಿಡಿಯಲಾಗದ ಕಾಹಿಲೆ ಬಂದು ತಮ್ಮ ಇಪ್ಪತ್ತೊಂಬತ್ತನೆಯ ವಯಸ್ಸಿನಲ್ಲಿಯೇ ಕ್ರಿ ಶ 1902ರಲ್ಲಿ ಕೊನೆಯುಸಿರೆಳೆದರು. ಇದು ಕವಿಯ ಒಂಟಿತನವನ್ನು ಮತ್ತಷ್ಟು ಹೆಚ್ಚಿಸಿತು.
            ರವೀಂದ್ರರು ತಮ್ಮ ಜೀವನದ ಮುಂಬಾಗಿಲಿನಲ್ಲೇ ಕವಿತಗಳನ್ನು ಬರೆಯಲು ಪ್ರಾರಂಭಿಸಿದರು. ರವೀಂದ್ರರಿಗೆ ಹನ್ನೊಂದು ವರ್ಷ ವಯಸ್ಸಿದ್ದಾಗ ತಂದೆ ದೇವೇಂದ್ರನಾಥರು ಅವರನ್ನು ಹಿಮಾಲಯದ ಕಡೆಗೆ ಪ್ರವಾಸ ಕರೆದುಕೊಂಡು ಹೋದರು. ಭೋಲ್ಪುರದಲ್ಲಿ ಸ್ವಲ್ಪ ಜಾಗವನ್ನು ಖರೀದಿಸಿ, ಶಾಂತಿನಿಕೇತನವೆಂಬ ಮನೆಯನ್ನು ಕಟ್ಟಿಸಿ, ಅಧ್ಯಯನ-ಧ್ಯಾನಗಳಲ್ಲಿ ತೊಡಗಿದ್ದರು. ವಿಶಾಲವಾದ ಬಯಲುಗಳು, ಎತ್ತರವಾದ ತಾಳೆಮರಗಳು ಮತ್ತು ನೀಲಾಕಾಶ ರವೀಂದ್ರರನ್ನು ಇಲ್ಲಿ ಆಕರ್ಷಿಸಿದವು. ಪೃಥ್ವಿಯ ಸೋಲು ಎಂಬ ಪದ್ಯವನ್ನು ಅವರು ಇಲ್ಲಿ ಬರೆದರು. ಕವಿತೆ ಬರೆಯುವ ಕಾರ್ಯ ಅವರಿಂದ ನಿರಂತರವಾಗಿ ಮುಂದುವರೆಯಿತು. ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ 1875ರಲ್ಲಿ ಭಾರತೀಯ ಸಂಸ್ಕೃತಿ ದರ್ಶನ ಪರಂಪರೆಗಳನ್ನು ಬಿಂಬಿಸುವ “ಹಿಂದಿಮೇಳ”ದಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರೆದುರು ಕವಿತೆ ಓದುವ ಅವಕಾಶ ಅವರಿಗೆ ದೊರೆಯಿತು. ಹದಿನಾರು ವರ್ಷ ವಯಸ್ಸಿದ್ದಾಗ “ಭಾರತಿ” ಎಂಬ ಪತ್ರಿಕೆಯ ಸಂಪಾದಕನ ಕೆಲಸವನ್ನು ಅವರು ನಿರ್ವಹಿಸಿದರು. ಈ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಾ ಗದ್ಯ ಬರವಣಿಗೆಯ ಸುಸಂಬದ್ಧ ಅಭ್ಯಾಸ ಇವರಿಗಾಯಿತು. ಹದಿನೇಳನೆಯ ವಯಸ್ಸಿನಲ್ಲಿ ‘ದಿ ಬ್ರೋಕನ್ ಹಾರ್ಟ್’, ಹದಿನೆಂಟನೆಯ ವಯಸ್ಸಿನಲ್ಲಿ ‘ಈವನಿಂಗ್ ಮೆಲಡಿ’, ‘ಸಾಂಗ್ ಆಫ್ ದಿ ಡಾನ್,’ ‘ನೇಚರ್ಸ್ ರಿಕ್ವಿಟಲ್’ – ಈ ಕವಿತಗಳನ್ನು ಬರೆದು ಪ್ರಕಟಿಸಿದರು. ಇವರ ಸಾಹಿತ್ಯಕಾರ್ಯ ಕವಿತೆಗಳಲ್ಲದೆ ನಾಟಕ, ಸಣ್ಣ ಕತೆ, ಕಾದಂಬರಿ, ಪ್ರಬಂಧ – ಈ ಕ್ಷೇತ್ರಗಳಲ್ಲಿಯೂ ನಡೆಯಿತು.ಇವರು ಮುನ್ನೂರಕ್ಕೂ ಹೆಚ್ಚು ಸಣ್ನ ಕತೆಗಳನ್ನು ಬರೆದಿದ್ದಾರೆ. ಇವು ‘ಸಾಧನಾ’ ಪತ್ರಿಕೆಯಲ್ಲಿ ಕ್ರಮವಾಗಿ ಪ್ರಕಟವಾದುವು. ಗೋರಾ ಇವರ ಪ್ರಖ್ಯಾತ ಕಾದಂಬರಿ. ‘ಚಿತ್ರಾಂಗದಾ’, ‘ಡಾಕ್ ಘರ್’, ‘ವಾಲ್ಮೀಕಿ ಪ್ರತಿಭಾ’ ಇತ್ಯಾದಿ ಇವರ ಪ್ರಮಖ ನಾಟಕಗಳು. ‘ಮಾನಸಿ’, ‘ಪುರವಿ’, ‘ನೈವೇದ್ಯ’, ಇತ್ಯಾದಿ ಇವರ ಕೆಲವು ಕವನ ಸಂಕಲನಗಳು. ‘ವಿಚಿತ್ರ ಪ್ರಬಂಧ’, ‘ಚೈತ್ರಪೂಜಾ’ ಇವರ ಖ್ಯಾತ ಪ್ರಬಂಧ ಸಂಕಲನಗಳು. ನೇರ ಸಹಜ ಅಭಿವ್ಯಕ್ತಿ, ಸರಳ ಭಾಷೆ, ಅಧ್ಯಾತ್ಮಿಕ ಒಲವು ಮತ್ತು ಗಾಢ ಚಂತನೆ – ಇವು ಇವರ ಕೃತಿಗಳಲ್ಲೆಲ್ಲ ಕಾಣುವ ಗುಣಗಳು. ಪ್ರಕೃತಿ ಈ ಕವಿಯ ಜೊತೆ ಮಾತನಾಡುತ್ತದೆ; ಕವಿಯನ್ನು ಆಡಿಸುತ್ತದೆ; ನೆಮ್ಮದಿಯುಕ್ತವಾಗಿ ಮಲಗಿಸುತ್ತದೆ; ಅವನಿಗೆ ದೈವೀ ರಹಸ್ಯಗಳನ್ನು ತೋರಿಸುತ್ತದೆ. ಮನುಷ್ಯ – ಮನುಷ್ಯ ಸಂಬಂಧಗಳ ಭಾವನಾಲೋಕವನ್ನು ಅನ್ವೇಷಿಸುವ ಮತ್ತು ಇತರರ ಅನುಭವಕ್ಕಾಗಿ ತೆರೆದಿಡುವ ಪ್ರೇರಣೆ ಈ ಸಾಹಿತಿಗೆ ಪ್ರಕೃತಿಯಿಂದ ಲಭಿಸುತ್ತದೆ. ದೈವ – ಮಾನವ ಸಂಬಂಧಗಳನ್ನು ಈ ನೆಲದಲ್ಲಿ ನಿಂತು ವಿಶ್ಲೇಷಿಸುತ್ತಾರೆ ಈ ಕವಿ. ಈ ಹಿನ್ನೆಲೆಯಲ್ಲಿ ಮೌಲ್ಯಗಳ ವಿವರಣೆ, ವಿಶ್ಲೇಷಣೆ ಮತ್ತು ಸ್ಥಾಪನೆ – ಇವುಗಳಿಂದ ಇವರ ಕೃತಿಗಳು ಮಹತ್ವ ಪಡೆಯುತ್ತವೆ.ಈ ಕಾರಣದಿಂದಲೇ ಇವು ವಿಶ್ವದ ಗಮನ ಸೆಳೆದಿವೆ. ಕೃತಿಯಲ್ಲಿನ ಈ ಗುಣಗಳ ಗುರುತಿಸುವಿಕೆ ಮತ್ತು ಸನ್ಮಾನ ರೂಪವಾಗಿ “ಗೀತಾಂಜಲಿ” ಕೃತಿಗೆ 1913ರಲ್ಲಿ ನೋಬೆಲ್ ಪಾರಿತೋಷಕ ಲಭಿಸಿದೆ.
            ಸಾಹಿತ್ಯ ಕೃತಿಗಳ ರಚನೆಯನ್ನಲ್ಲದೆ ರವೀಂದ್ರರು ಎಷ್ಟೋ ಮುಖ್ಯ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಎಸ್ಟೇಟುಗಳನ್ನು ನೋಡಕೊಳ್ಳುವುದು, ಸಂಬಂಧಿಕರಿಗೆ ಬಡವರಿಗೆ ಸಹಾಯ ಮಾಡುವುದು ಇತ್ಯಾದಿ ಕೌಟುಂಬಿಕ ಕೆಲಸಗಳು, ಪತ್ರಿಕಾ ಸಂಪಾದನೆ, ಸೇವಾ ಚಟುವಟಕೆಗಳು – ಹೀಗೆ ಬಹುಮುಖವಾಗಿ ಇವರು ಸದಾ ಕಾರ್ಯ ನಿರತರು. ಸೃಜನ ಕಾರ್ಯಗಳಲ್ಲಿಯೂ ಇವರ ಆಸಕ್ತಿ ವೈವಿಧ್ಯಮಯ: ನವ್ಯ ಚಿತ್ರಗಳನ್ನು ಇವರು ರಚಿಸಿದ್ದಾರೆ, ಹಾಡುಗಳನ್ನು ರಚಿಸಿ ಸಂಗೀತ ಅಳವಡಿಸಿದ್ದಾರೆ, ತಮ್ಮ ಕಾಲದ ಸಮಾಜಾಂದೋಲನಕ್ಕೆ ಸ್ಪಂದಿಸಿ ನಾಟಕ ರೂಪಕಗಳನ್ನು ರಚಿಸಿದ್ದಾರೆ ಇತ್ಯಾದಿ. ಸ್ವಾತಂತ್ರ್ಯ ಹೋರಾಟ ಹಿಂಸಾತ್ಮಕವಾಗದಂತೆ ಬರವಣಿಗೆ ಮತ್ತು ಭಾಷಣಗಳ ಮೂಲಕ ಪ್ರಯತ್ನಿಸಿದ್ದಾರೆ. ತಾವು ಶಾಲೆಯಲ್ಲಿ ಅನುಭವಿಸಿದ ನಿರಾಸಕ್ತಿಯನ್ನು ಬೇರೆ ಮಕ್ಕಳು ಅನುಭವಿಸಬಾರದೆಂಬ ಉದ್ದೇಶದಿಂದ ಶಾಂತಿನಿಕೇತನದಲ್ಲಿ ವಿಶಿಷ್ಟವಾದ ಶಾಲಾಕ್ರಮವನ್ನು ಪ್ರಾರಂಭಿಸಿದ್ದಾರೆ. ಅನಂತರ ಅದು ವಿಶ್ವಭಾರತಿ ವಿಶ್ವವಿದ್ಯಾಲಯವಾಗಿ ಪರಿವರ್ತಿತವಾಗಿ ಪ್ರಸಿದ್ಧವಾಗಿದೆ. ಹೀಗೆ ರವೀಂದ್ರರ ದುಡಿತ ಬಳಲಿಕೆ ಕಾಣದ್ದು. ಉತ್ಸಾಹ ಭರಿತವಾದದ್ದು.

            ಹೀಗೆ ರವೀಂದ್ರರು ಎಂಬತ್ತು ರ್ಷಗಳ ಸಮೃದ್ಧ ತುಂಬು ಜೀವನ ನಡೆಸಿರು. ಮುಪ್ಪಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಕೊಲ್ಕೊತ್ತೆಯಲ್ಲಿ ಚಿಕಿತ್ಸೆ ನೀಡಲಾಯಿತು. ಶಾಂತಿನಿಕೇತನದಿಂದ ಕೊಲ್ಕೊತ್ತೆಗೆ ತೆರಳುವ ಆ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಗ್ರಾಮಸ್ತರು ಭಾರದ ಹೃದಯದಿಂದ ತಮ್ಮ ಪ್ರೀತಿಯಿಂದ ‘ಗುರುದೇವ’ನನ್ನು ಬೀಳ್ಕೊಟ್ಟರು. ಅವರ ಆರೋಗ್ಯ ಚಿಕಿತ್ಸೆಯಿಂದ ಉತ್ತಮವಾಗಲಿಲ್ಲ. ಅವರು ಏಳನೆಯ ಅಗಸ್ಟ್ 1941ರ ಅಪರಾಹ್ನ ಕೊನೆಯುಸಿರೆಳೆದರು. “ಗೀತಾಂಜಲಿ” ಇವರ ಮುಖ್ಯ ಸಾಧನೆಗಳಲ್ಲೊಂದು. ಕಾಯಕ, ಸೌಂದರ್ಯೋಪಾಸನೆ, ಭಗವದರ್ಪಣ ಬುದ್ಧಿ – ಇವುಗಳ ಪ್ರತಿಪಾದನೆಯಿಂದಾಗಿ “ಗೀತಾಂಜಲಿ” ಭಾರತೀಯ ಸಂಸ್ಕೃತಿಯ ಪ್ರಸಾರಕನಾಗಿದೆ.

Wednesday 18 January 2017

ತರಗತಿಳಲ್ಲಿ ಕಲಿಕೆಯ ಗುಣಮಟ್ಟ ಹೆಚ್ಚಿಸುವ ಕ್ರಮಳು



vÀgÀUÀwUÀ¼À°è PÀ°PÉAiÀÄ UÀÄtªÀÄlÖ ºÉaѸÀĪÀ «zsÁ£ÀUÀ¼ÀÄ 
²PÀëtzÀ°è UÀÄtªÀÄlÖ JA§ÄzÀPÉÌ ¸ÀªÀð ¸ÀªÀÄävÀªÁzÀ ¤gÀÆ¥ÀuÉAiÉÆAzÀ£ÀÄß E£ÀÆß PÀAqÀÄPÉƼÀî¨ÉÃPÁVzÉ. ±Á¯Á «zÁåyðUÀ¼ÀÄ CªÀgÀ ¥ÉÆõÀPÀgÀÄ ªÀÄvÀÄÛ CªÀgÀ ²PÀëPÀgÀÄ EªÀgÀÄUÀ¼À zÀȶ֬ÄAzÀ ¥sÀ°vÁA±ÀUÀ¼Éà UÀÄtªÀÄlÖzÀ ¥ÀæªÀÄÄR ¸ÀÆZÀPÀUÀ¼ÀÄ. «zÁåyðUÀ½UÉ vÀªÀÄUÉ ºÉZÀÄÑ CAPÀ UÀ½¸À®Ä ¸ÁzsÀåªÁUÀĪÀ ²PÀët UÀÄtªÀÄlÖzÀ ²PÀët J¤¹PÉƼÀÄîvÀÛzÉ. ¥ÉÆõÀPÀjUÉ vÀªÀÄä ªÀÄPÀ̼ÀÄ GvÀÛªÀÄ CAPÀUÀ½¸ÀĪÀÅzÀÄ, EvÀjVAvÀ ªÀÄÄA¢gÀĪÀÅzÀÄ, GvÀÛªÀÄ PÁ¯ÉÃf£À°è ¥ÀæªÉñÀ zÉÆgÀQ¹PÉÆಳ್ಳುªÀÅzÀÄ C£ÀAvÀgÀ GvÀÛªÀÄ ºÀÄzÉÝUÀ½UÉ DAiÉÄÌUÉƼÀÄîªÀÅzÀÄ GvÀÛªÀÄ ²PÀët J¤¹PÉƼÀÄîvÀÛzÉ. CzsÁå¥ÀPÀgÀÄUÀ¼ÀÆ F UÀÄjAiÀÄvÀÛ¯Éà vÀªÀÄä ®PÀëöåªÀ£ÀÄß EnÖgÀÄvÁÛgÉ.
      DqÀ½vÀUÁgÀgÀ zÀȶÖAiÀÄÄ MAzÀÄ PÀqÉ ¥sÀ°vÁA±ÀzÀvÀÛ. CªÀjUÉ ¥Àæ¸ÀÄÛvÀªÁzÀ EvÀgÀ DAiÀiÁªÀÄUÀ¼ÉAzÀgÉ GvÀÛªÀÄ ªÀÄÆ® ¸Ë®¨sÀåUÀ¼À MzÀUÀuÉ, ¸ÀªÀĪÀ¸ÀÛç, ¥ÀoÀå ¥ÀĸÀÛPÀUÀ¼ÀÄ, ¥Àæw «µÀAiÀÄPÉÌ ªÀÄ£ÉUÉ®¸À ¥ÀĸÀÛPÀUÀ¼ÀÄ, PÁAiÀÄð ¥ÀĸÀÛPÀUÀ¼ÀÄ, GvÀÛªÀÄ ±Á¯Á aîUÀ¼ÀÄ ªÀÄvÀÄÛ EAvÀºÀªÀÅUÀ½AzÀ ¤gÀƦvÀªÁzÀ ²¸ÀÄÛ EªÀÅ UÀÄtªÀÄlÖzÀ ¸ÀÆZÀPÀUÀ¼ÀÄ. EªÀÅUÀ¼À eÉÆvÉUÉ ¸ÀºÀ¥ÀoÀå ZÀlĪÀnPÉUÀ¼À°è §ºÀĪÀiÁ£ÀUÀ½PÉAiÀÄÆ EzÀÝgÉ a£ÀßPÉÌ ¸ÀÄUÀAzsÀ«lÖAvÉ. ಶಾ¯ÉUÉ vÀªÀÄä ªÀÄPÀ̼À£ÀÄß ¸ÉÃj¸ÀĪÁUÀ vÀAzÉvÁ¬ÄUÀ¼ÀÄ £ÉÆÃqÀĪÀÅzÀÆ EªÀÅUÀ¼À£ÉßÃ. ªÀÄÆ® ¸Ë®¨sÀåUÀ¼ÀÄ, ¨ÁºÀå ²¸ÀÄÛ EªÉà PÀ°PÉAiÀÄ UÀÄtªÀÄlÖªÀ£ÀÄß ºÉaѸÀĪÀ ¸ÁzsÀ£ÀUÀ¼À®è JA§ÄzÀÄ ¸ÀàµÀÖ. AiÀÄģɸÉÆÌ ªÉgÀ¢AiÉÆAzÀgÀ°è “[e]xtant empirical evidence is inconclusive as to whether the condition of school buildings is related to higher student achievement after taking into account student’s background” (Fuller, 1999) JAzÀÄ C©ü¥ÁæAiÀÄ ¥ÀqÀ¯ÁVzÉ.DzÀgÀÆ ªÀÄÆ®¸Ë®¨sÀåUÀ¼ÀÄ, ¸ÁªÀiÁ£Àå ²¸ÀÄÛ EªÀÅ ±Á¯ÉAiÀÄ ¸ÀĸÀÆvÀæ PÁAiÀÄð¤ªÀðºÀuÉUÉ CUÀvÀå JA§ÄzÀ£ÀÄß C®èUÀ¼ÉAiÀÄĪÀAw®è.
      ²PÀëtªÀÅ ±Á¯É, ¥ÀjÃPÉë ªÀÄvÀÄÛ CAPÀUÀ¼ÀÄ, ¸ÀàzsÉðUÀ¼ÀÄ E«µÀÖPÉÌà ¹Ã«ÄvÀªÀ®è JA§ÄzÀÆ ¸ÀàµÀÖ. ªÀåQÛ ²PÀët ªÀåªÀ¸ÉܬÄAzÀ ºÉÆgÀ§AzÀ ªÉÄÃ¯É ¸ÀªÀiÁdzÀ ¸ÀzÀ¸Àå£ÁV vÀ£Àß ¨Á¼À£ÀÄß ¥ÁægÀA©ü¹zÁUÀ ²PÀëtzÀ ¥ÀjuÁªÀÄUÀ¼ÀÄ PÁt¹PÉƼÀî¯ÁgÀA©ü¸ÀÄvÀÛªÉ. EAf¤AiÀÄgÀÄUÀ¼ÀÄ PÀnÖzÀ ¸ÉÃvÀĪÉAiÀÄÄ GzÁÏl£ÉUÉƼÀÄîªÀ ªÉÆzÀ¯Éà KPÉ ©Ã¼ÀÄvÀÛzÉ? Qrß PÀzÁÝgÉAzÀÄ ªÉÊzÀågÀ£ÀÄß ¸ÀA±ÀAiÀÄ¥ÀqÀĪÀAvÀºÀ ¥Àj¹Üw gÉÆÃVUÀ½UÉ KPÉ §gÀÄvÀÛzÉ? £ÀªÀÄä ²PÀët ªÀåªÀ¸ÉÜAiÀÄ°è ªÀÄƸÉUÀAqÀ ªÀåQÛUÀ¼ÀÄ £ÁAiÀÄPÀvÀé ¸ÁÜ£ÀUÀ¼À°è PÀĽvÁUÀ, C¢üPÁjUÀಳಾzÁUÀ ¨sÀæµÀÖvÉUÉ KPÉ M¼ÀUÁUÀÄvÁÛgÉ? EAvÀºÀ ¥Àæ±ÉßUÀ¼ÀÄ ¸ÀªÀiÁdzÀ°è ¥ÀæwAiÉƧâgÀ£ÀÆß CzÀgÀ®Æè ¥ÀæeÁߪÀAvÀ £ÁUÀjÃPÀgÀ£ÀÄß PÁqÀÄvÀÛ¯Éà EªÉ. ¹°AqÀgÀzÀ WÀ£À¥sÀ®, PÉëÃvÀæ¥sÀ® EvÁå¢UÀ¼À£ÀÄß PÀ°vÀÄ J¸ï J¸ï J¯ï ¹ ¦ AiÀÄÄ ¹ ¥Á¸ï ªÀiÁr ºÉÆgÀ§AzÀ vÀªÀÄä ªÀÄPÀ̼ÀÄ vÁªÀÅ Rjâ¸À¨ÉÃPÁzÀ ªÀÄgÀzÀ vÀÄAr£À WÀ£À¥sÀ®ªÀ£ÁßUÀ°, vÀªÀÄä ¨Á«AiÀÄ°ègÀ§ºÀÄzÁzÀ ¤Ãj£À ¥ÀæªÀiÁtªÀ£ÁßUÀ°Ã ¯ÉPÀ̺ÁPÀ®Ä KPÉ ¸ÀªÀÄxÀðgÁUÀĪÀÅ¢®è? © J/© J¸ï¹AiÀÄAvÀºÀ ¥ÀzÀ«UÀ¼À£ÀÄß ¥Á¸ÀĪÀiÁr §AzÀ ªÀåQÛUÀ¼ÀÆ vÀªÀÄä DªÀ±ÀåPÀvÉUÉ vÀPÀÌ CfðUÀ¼À£ÉÆßà ¥ÀvÀæUÀ¼À£ÉÆßà §gÉAiÀÄ®Ä KPÉ ¸ÀªÀÄxÀðgÁUÀĪÀÅ¢®è? EAvÀºÀªÀÇ ±ÉÊPÀëtÂPÀªÁV ªÀÄÄRåªÁUÀÄvÀÛªÉ.
      »ÃUÉ ²PÀëtzÀ UÀÄtªÀÄlÖPÉÌ ªÀÄÆgÀÄ DAiÀiÁªÀÄUÀ¼ÀÄ:
            1. ªÀÄÆ®¸Ë®¨sÀåUÀ¼ÀÄ ªÀÄvÀÄÛ ¥ÀƪÀð ¤zsÁðjvÀ ¥ÀoÀåPÀæªÀÄ, ¥ÀoÀå¥ÀĸÀÛPÀ EvÁå¢UÀ¼ÀÄ
            2. vÀgÀUÀw ¥ÀæQæAiÉÄUÀ¼ÀÄ
            3. «zÁåyð¸ÁzsÀ£ÉUÀ¼ÀÄ 
      ªÀåQÛUÀ¼À ¸ÁzsÀ£ÉUÀ¼À£ÀÄß ²PÀëtzÀ eÉÆvÉUÉ ¸ÀA§A¢üÃPÀj¸ÀĪÀÅzÀÄ PÀrªÉÄ. EªÀÅ ªÀåQÛAiÀÄ UÀÄuÁªÀUÀÄtUÀ¼À, ±ÀQÛ z˧ð®åUÀ¼À, ¸ÁzsÀ£É OzÁ¹Ã£ÀåUÀ¼À zÉÆåÃvÀPÀUÀ¼ÁV ¹éÃPÀÈvÀªÁUÀÄvÀÛªÉ. «zÉå¬ÄAzÀ zÉÆgÀPÀĪÀ UÀÄtUÀ¼À PÀqÉUÉ UÀªÀÄ£ÀºÀj¸ÀzÉ, NzÀħgÀºÀ¢AzÀ zÉÆgÉAiÀÄĪÀ ¯Á¨sÀUÀ¼Éà ªÀÄÄRå JAzÀÄ £ÁªÀÅ w½AiÀÄÄwÛzÉÝêɔ.        EAvÀºÀ «µÀAiÀÄUÀ¼À°è ªÀåQÛAiÀÄ ªÀvÀð£ÉUÀ¼ÀÄ ªÀåQÛUÉ ªÀÄvÀÄÛ ¸ÀªÀiÁdPÉÌ G¥ÀAiÀÄÄPÀÛªÁVgÀĪÀAvÉ gÀƦ¸ÀĪÀÅzÀÄ ²PÀëtzÀ MAzÀÄ ªÀÄÄRå PÁAiÀÄðªÉA§ÄzÀ£ÀÄß ²PÀëPÀgÀÄ ªÀÄvÀÄÛ ²PÀët ªÀåªÀ¸ÉÜAiÀÄ §UÉÎ PÁ¼Àf EgÀĪÀªÀgÀÄ M¥Àà¨ÉÃPÁVzÉ. ¸ÀªÀð jÃwAiÀÄ°è C¥ÉÃPÀëtÂÃAiÀÄ ªÀvÀð£ÉUÀ¼À gÀÆ¥ÀuÉAiÀÄ£ÀÄß UÀÄtªÀÄlÖzÀ ªÀÄÄRå ¸ÀÆZÀPÀªÀ£ÁßV ¹éÃPÀj¸ÀĪÀÅzÀÄ eÁUÀwÃPÀgÀtzÀ »£É߯ÉAiÀÄ°è PÀÆqÀ ¥Àæ¸ÀÄÛvÀªÁUÀÄvÀÛzÉ. KPÉAzÀgÉ ²PÀëtªÀ£ÀÄß MAzÀÄ §¼ÀPÉAiÀÄ ªÀ¸ÀÄÛªÉAzÀÄ ¥ÀjUÀt¹zÀgÉ CzÀgÀ §¼ÀPÉzÁgÀgÀ vÀȦÛAiÉÄà GvÀÛªÀÄ UÀÄtªÀÄlÖzÀ ¤zsÁðgÀPÀªÁVgÀÄvÀÛzÉ ªÀÄvÀÄÛ ²PÀëtzÀ ²PÀëtzÀ DvÀåAwPÀ §¼ÀPÉzÁgÀgÁzÀ ¸À£ÁdzÀ ¸ÀzÀ¸ÀåjUÉ F CA±ÀªÀÅ vÀȦÛzÁAiÀÄPÀªÁVzÉ.
      EAvÀºÀ ¸ÀAzÀ¨sÀðzÀ°è ±Á¯ÉAiÀÄ ¥ÁvÀæªÉãÀÄ vÀgÀUÀwAiÀÄ ²PÀëPÀ£À ¥ÁvÀæªÉãÀÄ JA©ªÀÅ ¥Àæ¸ÀÄÛvÀvÀªÀÄ ¥Àæ±ÉßUÀ¼ÀÄ. ªÀvÀð£ÉUÀ¼À£ÀÄß gÀƦ¸ÀĪÀ PÁAiÀÄðªÀÅ M§â ²PÀëPÀ£À PÁAiÀÄðªÁUÀ®Ä DzsÀå«®è. CzÀÄ ±Á¯ÉAiÀÄ°ègÀĪÀ J®è ²PÀëPÀgÀ ¸ÁªÀÄÆ»PÀ ªÀÄvÀÄÛ MªÀÄÄäR ¥ÀæAiÀÄvÀߢAzÀ ªÀiÁvÀæ ¸ÁzsÀåªÁUÀĪÀÅzÀÄ. EzÀPÉÌ ¥ÉÆõÀPÀgÀ ºÀÈvÀÆàªÀðPÀ ¸ÀºÀPÁgÀ ªÀÄvÀÄÛ ±Á¯ÉAiÉÆA¢UÉ ¤gÀAvÀgÀ ¸ÀA¥ÀPÀð PÀÆqÀ CUÀvÀå. ±Á¯ÉUÀ¼À°è £ÉêÀÄPÁwUÁV ®AZÀ/zÉÃtÂUÉ. ªÀUÁðªÀuÉUÁV C£ÀAvÀgÀ ªÀiÁvÀȱÁ¯É¬ÄAzÀ ©qÀÄUÀqÉUÁV ªÀÄvÀÆÛ C£ÀAvÀgÀ ºÉƸÀ ±Á¯ÉAiÀÄ°è ¸ÉÃ¥ÀðqÉUÁV ««zsÀ ¸ÀÛgÀUÀ¼À°è ®AZÀ EAvÀºÀªÉ®è ¥ÁæªÀiÁtÂPÀ CzsÁå¥ÀPÀgÀÆ CgɪÀÄ£À¹ì¤AzÀ £ÉÊwPÀ ¥ÁoÀUÀ¼À£ÀÄß ºÉüÀĪÀAvÉ ªÀiÁqÀÄvÀÛªÉ. »ÃVzÀÝgÀÆ ±Á¯ÉAiÀÄÄ vÀ£Àß ¸ÀvÀÛ÷éªÀ£ÀÄß PÀ¼ÉzÀÄPÉƼÀîzÉ PÉ®¸À ªÀiÁqÀ¢zÀÝgÉ ªÀÄUÀÄ«£À ªÀåQÛvÀéªÀÅ ¥ÀÆtðªÁV CgÀ¼ÀĪÀÅzÀÄ ¸ÁzsÀåªÁUÀzÀÄ. MmÁÖgÉ PÀ®Ä¶vÀ ªÁvÁªÀgÀtzÀ°èAiÀÄÆ ±Á¯ÉUÀ¼ÀÄ vÀªÀÄä G¥Àà£ÀÄß PÀ¼ÉzÀÄPÉƼÀî¢gÀĪÀÅzÀÄ MAzÀÄ ¨sÀgÀªÀ¸ÉAiÀÄ QgÀtªÉAzÀÄ ºÉüÀ§ºÀÄzÀÄ.
      GvÀÛªÀÄ ¸ÁªÀÄxÀåðUÀ½gÀĪÀ «zÁåyðUÉ CªÀÅUÀ¼À£ÀÄß UÀ½¹PÉƼÀî®Ä GvÀÛªÀÄ CªÀPÁ±ÀUÀ¼À£ÀÄß ¤ÃqÀĪÀÅzÀÄ  JA§ ¥Àæw¥ÁzÀ£ÉAiÀÄ£ÀÄß UÀªÀĤ¹zÀgÉ vÀgÀUÀwAiÀÄ°è ²PÀëPÀ£À dªÁ¨ÁÝjAiÀÄ ªÀĺÀvÀÛ÷CjªÁUÀÄvÀÛzÉ. fêÀ£À P˱À®UÀ¼ÁzÀ vÀ£Àß ¤®ÄªÀÅUÀ¼À£ÀÄß ¥Àæw¥Á¢¸ÀĪÀ, vÀ£ÀUÉ ¸ÀjPÁtzÀAvÀºÀªÀ£ÀÄß wgÀ¸ÀÌj¸ÀĪÀ UÀÄj¤zsÁðgÀ, EvÀgÀgÉÆAEzÀUÉ ºÉÆAzÁtÂPÉAiÀÄAvÀºÀ EªÀÅUÀ¼À£ÀÄß ¨É¼É¸ÀĪÀ CUÀvÀåªÀ£ÀÄß AiÀÄĤ¸É¥sï MwÛ ºÉýzÉ(UNICEF, 2000). ¸ÁªÀÄxÀåðUÀ¼À£ÀÄß, ¸ÀÈd£À²Ã®vÉAiÀÄ£ÀÄß, ªÁ¸ÀÛ«PÀvÉAiÀÄ£ÀÄß JzÀÄj¸ÀĪÀ ªÀÄ£ÉÆÃzsÉÆÃgÀuÉAiÀÄ£ÀÄß, £ÁUÀjÃPÀ ¸ÀªÀiÁdªÀ£ÀÄß ²æêÀÄAvÀUÉƽ¸À§®è D¸ÀQÛUÀ¼À£ÀÄß ªÀÄPÀ̼À°è ªÀÈ¢ÞUÉƽ¸ÀĪÀÅzÀÄ vÀgÀUÀwAiÀÄ ²PÀëPÀ¤UÉ ªÀiÁvÀæ ¸ÁzsÀå. . ¥ÀæwAiÉƧ⠲PÀëPÀ F ¤nÖ£À°è ±ÀæzÁÞ ¥ÀƪÀðPÀªÁV, ¸ÉÆéÃ¥ÀdÕvɬÄAzÀ ªÀÄvÀÄÛ ¥ÁæªÀiÁtÂPÀªÁV ¥ÀæAiÀÄvÀ߲î£ÁUÀĪÀÅzÀÄ ¥ÀæxÀªÀÄ CUÀvÀå. vÀdÕ¸À®ºÉAiÀÄ gÀÆ¥ÀzÀ°è MzÀUÀĪÀ ¸À®ºÉUÀ¼ÀÄ, ¸ÀgÀPÁjà DzÉñÀUÀ¼ÀÄ, ªÉÄîĸÀÄÛªÁj C¢üPÁjUÀ¼À ªÀiÁUÀðzÀ±Àð£À, ²PÀëPÀ vÀgÀ¨ÉÃwUÀ¼ÀÄ EAvÀºÀªÉ®è ¥ÀÆgÀPÀ ªÀÄvÀÄÛ ¥ÉÆõÀPÀ ¥ÀæAiÀÄvÀßUÀ¼ÁV ªÀiÁvÀæ G¥ÀAiÀÄÄPÀÛªÁUÀĪÀŪÀÅ. M§âgÀÄ C£ÀħAzsÀ£ÀªÁ¢Ã vÀvÀÛ÷éUÀ¼À£ÁßzsÀj¹ PÀ°¸ÀĪÀÅzÀPÉÌ ¥ÁæzsÁ£Àå ¤ÃqÀĪÀÅzÀÄ(NCFSE,2000), E£ÉÆߧâgÀÄ PÉëÃvÀæ ¹zÁÞAvÀUÀ¼À£ÁßzsÀj¹ PÀ°¹zÀgÉ ªÀiÁvÀæ PÀ°PÉAiÀiÁUÀĪÀÅzÉAzÀÄ ¥Àæw¥Á¢¸ÀĪÀÅzÀÄ (NCF,2005) EAvÀºÀ zÀéAzÀéUÀ¼ÀÄ CzsÁå¥ÀPÀd£ÀgÀ°è UÉÆAzÀ®¸Àȶֹ ¤ÃZÀvÀé¨sÁªÀ ªÀÄvÀÄÛ C¥ÀgÁ¢ü¨sÁªÀUÀ½UÉ PÁgÀtªÁUÀÄvÀÛªÉ.( ²PÀët ¤ÃwUÀ¼À gÀÆ¥ÀzÀ°è ªÀÄvÀÄÛ PÁAiÀÄðPÀæªÀÄUÀ¼À gÀÆ¥ÀzÀ°è C£ÀĸÀj¸ÀĪÀAvÉ ²PÀëPÀjUÉ ºÉüÀĪÀ EAvÀºÀ ¥ÀæAiÀÄvÀßUÀ¼É®è CgɧgÉ ¥ÀæAiÀÄvÀßUÀ¼ÁV CªÀÅUÀ¼À G¥ÀAiÀÄÄPÀÛvÉ PÀrªÉÄAiÀiÁUÀÄvÀÛzÉ. EAvÀºÀªÀÅ gÁdåªÀÄlÖzÀ°èAiÀÄÆ gÁµÀÖçªÀÄlÖzÀ°èAiÀÄÆ £ÀqÉAiÀÄÄwÛzÀÄÝ F ¤nÖ£À°è ¤Ãw¤gÀÆ¥ÀPÀgÀÄ JZÉÑvÀÄÛPÉƼÀÄîªÀÅzÀÄ CUÀvÀå.
      gÁdåzÀ°è EAvÀºÀ PÁAiÀÄðPÀæªÀÄUÀ¼À MAzÀÄ ¸ÀAQë¥ÀÛ ¥ÀjZÀAiÀĪÀ£ÀÄß E°è ¤ÃqÀ§ºÀÄzÀÄ.:
PÀ¤µÀ× PÀ°PÁ ºÀAvÀUÀ¼ÀÄ: `1978jAzÀ¯Éà PÀPÀªÀÄzÀ ¥ÀjPÀ®à£É ¨É¼ÉzÀħA¢gÀĪÀÅzÁV w½zÀħgÀÄvÀÛzÁzÀgÀÆ F PÁAiÀÄðªÀÅ ²ÃWÀæUÉÆÃAqÀÄzÀÄ ªÀÄvÀÄÛ FV£À ¸ÀégÀÆ¥ÀzÀ°è gÀÆ¥ÀÄUÉÆÃAqÀÄzÀÄ 1990gÀ°è DUÀ J£ï ¹ E Dgï n ¤zÉÃð±ÀPÀgÁVzÀÝ ²æà Dgï JZï zÀªÉ EªÀgÀ £ÉÃvÀÈvÀézÀ°è ¸À«ÄwAiÉÆAzÀÄ gÀZÀ£ÉUÉÆAqÀÄ PÉ®¸ÀªÀ£ÀÄß PÉÊUÉwÛPÉÆAqÀ ªÉÄïÉ. ¥ÀoÀåªÀ¸ÀÄÛªÀ£ÀÄß ¸ÀtÚ¸ÀtÚ vÀÄtÄPÀÄUÀ¼À£ÁßV MqÉzÀÄPÉƼÀÄîªÀÅzÀÄ ¥ÀæwAiÉÆAzÀ£ÀÆß ¤¢ðµÀÖ ¨ÉÆÃzsÀ£ÉÆÃzÉÝñÀªÉÇAzÀgÉÆqÀ£É ¸ÉÃj¹ ºÉüÀĪÀÅzÀÄ EªÀÅUÀ¼À PÀ°PÉUÁV ¸ÀÆPÀÛ ZÀlĪÀnPÉUÀ¼À£ÀÄß gÀƦ¹«¢ E°è ªÀÄÄRå. EAvÀºÀ MAzÉÆAzÀÄ ¸ÀAAiÉÆÃd£ÉAiÀÄ£ÀÆß MAzÉÆAzÀÄ ¸ÁªÀÄxÀåðªÉAzÀÄ E°è PÀgÉAiÀįÁVzÉ. »ÃUÉ ¤gÀƦ¸À¯ÁzÀ ¸ÁªÀÄxÀåðUÀ¼À£ÀÄß ±ÉæÃtÂÃPÀj¹ ¥Àæw«zÁåyð MAzÀgÀ£ÀAvÀgÀ E£ÉÆßAzÀ£ÀÄß PÀ°AiÀÄĪÀAvÉ ªÀÄvÀÄÛ EzÀPÁÌV vÀ£ÀUÉ CUÀvÀå«gÀĪÀ ¸ÀªÀÄAiÀiÁªÀPÁ±ÀªÀ£ÀÄß §¼À¹PÉƼÀî®Ä ¸ÁzsÀå«gÀĪÀAvÉ ªÀåªÀ¸ÉÜUÉƽ¸À¯ÁVzÉ. EzÀÄ ¸ÁzsÀåªÁUÀĪÀAvÉ PÀ°PÁZÀlĪÀnPÉUÀ¼À£ÀÄß ¸ÀÆa¸À¯ÁVzÉ ªÀÄvÀÄÛ CzsÁå¥ÀPÀgÀÄ F PÁAiÀÄðªÀ£ÀÄß ¸ÀªÀÄxÀðªÁV ¤ªÀð»¸À®Ä ¸ÁzsÀåªÁV¸ÀĪÀ ¸ÁévÀAvÀæöåªÀ£ÀÆß ªÀ»¸À§ºÀÄzÁVzÉ. EzÀÄ ªÀiÁ¸ÀÖj mÉæöʤAUï ªÀiÁqɯï JAzÀÄ PÀgÉAiÀįÁUÀĪÀ ¨ÉÆÃzsÀ£Á ªÀiÁzÀjAiÀÄAvÉ EzÉ J£ÀߧºÀÄzÀÄ. F PÁAiÀÄðAiÉÆÃd£ÉAiÀÄ£ÀÄß 19995gÀ°è ¨sÁgÀvÀzÀ DAiÀÄÝ gÁdåUÀ¼À°è DAiÀÄÝ ±Á¯ÉUÀ¼À°è ¥ÁæAiÉÆÃVPÀªÁV eÁjUÉƽ¸À¯Á¬ÄvÀÄ.
      F ¸ÀÄzsÁjvÀ PÀæªÀĪÀÅ ºÀ®ªÀÅ jÃwUÀ¼À°è ¥sÀ®¥ÀæzÀªÁV ¥ÀjuÁªÀÄPÁjà PÀ°PÉUÉ PÁgÀtªÁUÀ§ºÀÄzÁVvÁÛzÀgÀÆ PÉÆgÀvÉUÀ½AzÀ ¸ÉÆgÀV AiÀıÀ¸ÀÄì PÉÊUÀÆqÀĪÀÅzÀÄ ¸ÁzsÀåªÁUÀ°®è. F PÀæªÀÄzÀ°è CzsÁå¥ÀPÀgÀÄ ««zsÀ jÃwAiÀÄ zÁR¯ÉUÀ¼À£ÀÄß §gÉzÀÄ vÀ¥Á¸ÀuÁ¢üPÁjUÀ½UÉ vÉÆÃj¸ÀĪÀÅzÀÄ PÀqÁØAiÀĪÁVvÀÄÛ. EzÀjAzÀ ²PÀëPÀgÀ £ÀqÀÄªÉ F PÁAiÀÄðAiÉÆÃd£ÉAiÀÄÄ C¦æAiÀiÁªÁ¬ÄvÀµÉÖà C®è, CªÀgÀÄ EzÀ£ÀÄß zÉéö¸À®Æ ¥ÁægÀA©ü¹zÀgÀÄ. F AiÉÆÃd£ÉAiÀÄÄ ¥ÉÊ®mï PÁAiÀÄðPÀæªÀĪÁV PÉ®ªÀÅ ±Á¯ÉUÀ¼À°è ªÀiÁvÀæ C£ÀĵÁ×£ÀUÉÆAqÀÄzÀjAzÀ ¥ÉÆõÀPÀgÀÆ vÀªÀÄä ªÀÄPÀ̼ÀÆ J®è ±Á¯ÉUÀ¼À ªÀÄPÀ̼ÀÄ PÀ°AiÀÄĪÀAvÉ ªÀÄvÀÄÛ CzÉà «µÀAiÀÄUÀ¼À£ÀÄß ºÁUÉAiÉÄà PÀ°AiÀĨÉÃPÉAzÀÄ DUÀ滹zÀgÀÄ. ²PÀëtªÉA§ ±ÉÊPÀëtÂPÀ ²¹Û£À°è CµÁÖV ¥Àj±ÀæªÀÄ«®èzÀªÀgÀÄ F PÁAiÀÄðPÀæªÀÄzÀ ªÀiË®åªÀiÁ¥À£À PÁAiÀÄðªÀ£ÀÄß PÉÊUÉwÛPÉÆAqÀÄzÀÆ F ¤nÖ£À°è IÄuÁvÀäªÁV
ZÉÊvÀ£Àå: EzÀÄ C£ÀħAzsÀ£À ¹zÁÞAvÀªÀ£ÁßzsÀj¹zÀ MAzÀÄ PÁAiÀÄðPÀæªÀÄ. PÀ°¸À¨ÉÃPÁzÀ ªÀ¸ÀÄÛªÀ£ÀÄß aPÀÌ vÀÄtÄPÀÄUÀ¼À£ÁßV MqÉzÀÄPÉƼÀÄîªÀÅzÀÄ, CªÀÅUÀ¼À¯ÉÆèAzÉÆAzÀ£ÀÆß ¤¢ðµÀÖ ¸ÁªÀÄxÀåzÉÆA¢UÉ vÀ¼ÀÄPÀĺÁPÀĪÀÅzÀÄ, vÀ£ÀÆä®PÀ ¥ÀÄ£À§ð®£ÀUÀ¼À£ÀÄß ¤Ãr PÀ°¸ÀĪÀÅzÀÄ EªÉ®è E°è C£ÀħAzsÀ£ÀªÁzÀzÀ ¥ÀæPÁgÀ EgÀĪÀAvÀºÀªÀÅ.
EzÉÆAzÀÄ ZÀlĪÀnPÁ¸ÀgÀtÂ¥ÀæzsÁ£À PÀ°PÁ¨ÉÆÃzsÀ£Á «zsÁ£À. ¥ÀƪÀð ¹zÀÞvÁ ZÀlĪÀlÄEPÉ, PÀ°PÁ¥ÀƪÀð ZÀlĪÀnPÉ, PÀ°PÁA±À ZÀlĪÀnPÉ,C¨sÁå¸À ZÀlĪÀnPÉ, §¼ÀPÉAiÀÄ ZÀlĪÀnPÉ ªÀÄvÀÄÛ ªÀiË®åªÀiÁ¥À£À ZÀlĪÀnPÉ F ªÀUÀðUÀ¼À ZÀlĪÀnPÉUÀ¼À ªÀÄÆ®PÀ ¥ÁoÀªÀ£ÀÄß PÀlÄÖªÀÅzÀÄ E°èAiÀÄ ¥Àj(ZÉÊvÀ£Àå, ¥ÀÄ.9-10).
E°èAiÀÄ ªÉʲµÀÖöåªÉAzÀgÉ ¨sËwPÀ ZÀlĪÀnPÉ. «zÁåyðUÀ¼À ¸ÀÆPÀÛ ¨sËwPÀ ZÀlĪÀnPÉUÀ¼ÀÄ CªÀgÀ°è CxÀð¥ÀÆtð PÀ°PÉ vÀgÀ§®ÄèzÀÄ JA§ UÀæ»PÉ. ¥ÁæxÀ«ÄPÀ ±Á¯ÁgÀUÀwUÀ¼À ªÀÄPÀ̽UÉ EAvÀºÀ ««zsÀ ¸ÀÛgÀUÀ¼À ZÀlĪÀnPÉUÀ¼À£ÀÄß gÀƦ¹PÀqÀ¯ÁVzÉ. ºÀ®ªÀÅ ²PÀëPÀgÀÄ F ¥ÀzÀÞwAiÀÄ£ÀÄß ¯Á¨sÀzÁAiÀÄPÀªÁV §¼À¹zÀgÀÄ. PÉ®ªÀgÀÄ AiÀiÁªÀÅzÁzÀgÀÆ jÃwAiÀÄ ¨sËwPÀ ZÀ®£ÉAiÀÄ£ÀÄß vÀgÀĪÀÅzÀPÉÌà J®è ¥ÁæªÀÄÄRåªÀ£ÀÄß PÉÆlÄÖ PÀ°PÉAiÀÄ zÀȶ֬ÄAzÀ ZÀlĪÀnPÉAiÀÄ CxÀðªÀAwPÉUÉ CµÁÖV UÀªÀÄ£ÀPÉÆqÀ°®è. ¨ÉÃgÉ ¨ÉÃgÉ PÉ®ªÀgÀÄ EzÀgÀ C£ÀĵÁ×£ÀPÉÌ ªÀÄ£À¸ÀÄì ªÀiÁqÀ°®è. ¤zÉÃð±À£ÀUÀ¼À ¥ÀæPÁgÀ SÁ¸ÀV ±Á¯Á DqÀ:½vÀUÀ¼ÀÄ vÀªÀÄä ²PÀëPÀjUÉ F ¥ÀzÀÞwAiÀÄ §UÉÎ ¸ÀÆPÀÛ vÀgÀ¨ÉÃw¼À£ÀÄß DAiÉÆÃf¸À¨ÉÃPÁVzÀÄÝ F PÁAiÀÄð ¸ÁªÀðwæPÀªÁV £ÉgÀªÉÃgÀ°®è. EªÀÅUÀ¼É®èªÀÅUÀ½AzÀ F ¥ÀzÀÝw ¤jÃQë¹zÀµÀÄÖ ¥ÀjuÁªÀÄ ©ÃgÀ°®è. DzÀgÀÆ EzÀÄ CzsÁå¥ÀPÀgÀ §vÀÛ½PÉAiÀÄ°è MAzÀÄ C¸ÀÛçªÁV G½¬ÄvÉ£ÀߧºÀÄzÀÄ.
mÉæöʪÉĸÀÖgï: EzÀÄ EzÀÄ ±Á¯Á ªÀÄPÀ̽UÉ ¨Ë¢ÞPÀ ºÁUÀÆ ªÀiÁ£À¹PÀ ºÉÆgÉ, ¥ÀjÃPÉë §UÉV£À ¨sÀAiÀÄ EªÀÅUÀ¼À£ÀÄß ¤ªÁj¸À®Ä ªÀÄvÀÄÛ ¥ÀjÃPÉëAiÀÄ°è ¸ÀÄzsÁgÀuÉ vÀgÀĪÀ ¤nÖ¤AzÀ gÁeÁåzÀåAvÀ 2004-05£ÉAiÀÄ ¸Á°£À°è eÁjUÉ vÀgÀ¯ÁzÀ AiÉÆÃd£É. ªÀÄÆgÀĪÀÄÆgÀÄ wAUÀ¼ÀÄUÀ¼À£ÀÄß MAzÉÆAzÀÄ PÀ°PÁ CªÀ¢üAiÀÄ£ÁßV ¥ÀjUÀt¹ ¥Àæw mÉæöʪÉĸÀÖjUÉ ¨ÉÃPÁzÀ «µÀUÀ¼À£ÀßµÉÖ ¸ÉÃj¹ J®è«µÀAiÀÄUÀ¼À£ÀÄß ¸ÀªÀÄ£Àé¬Ä¹ ¥ÀĸÀÛPÀ vÀAiÀiÁj¸ÀĪÀ AiÉÆÃZÀ£ÉAiÀÄÄ EvÉÛAzÀÄ vÉÆÃgÀÄvÀÛzÉ. CAvÀºÀ ¥ÀĸÀÛPÀUÀ¼ÀÄ ²PÀëPÀjUÉ ®¨sÀåªÁUÀ°®è. mÉæöʪÉĸÀÖgï ªÀµÀðzÀ°è JgÀqÀgÀ §zÀ®Ä ªÀÄÆgÀÄ ¥ÀjÃPÉëUÀ¼À£ÀÄß £ÀqɸÀĪÀ PÁAiÀÄðPÀæªÀĪÁV ªÀiÁvÀæ G½¬ÄvÀÄ.. ¥Ámïð © JA§ ¨sÁUÀªÀ£ÀÄß PÀ°à¹ ªÀÄPÀ̽UÉ ¥ÁædPÀÄÖUÀ¼À£ÀÄß PÉÆlÄÖ ªÀiË®åªÀiÁ¥À£À ªÀiÁqÀĪÀ «zsÁ£ÀªÀÅ ¸Àé®àªÀÄnÖUÉ ªÀÄPÀ̼À°è ¸ÀÈd£À²Ã®vÉAiÀÄ£ÀÄß ¨É¼É¸À®Ä £ÉgÀªÁwvÉ£ÀߧºÀÄzÀÄ. mÉæöʪÉĸÀÖgï ¥ÀzÀÞwAiÀÄ°è ¥ÀjÃPÉëUÀ¼À ºÉÆgÉ ºÉZÁѬÄvÉA§ £É¯ÉAiÀÄ°è EzÉà ¸ÉªÉĸÀÖgï PÀæªÀĪÁV ¥ÀjªÀwðvÀªÁ¬ÄvÀÄ.
£À°PÀ°: £À°PÀ° PÁAiÀÄðAiÉÆÃd£ÉAiÀÄ£ÀÄß PÁæAwPÁjà PÀæªÀĪÉAzÉà ¸ÁªÀiÁ£ÀåªÁV  ¥ÀjUÀt¸À¯ÁUÀÄvÀÛzÉ. 1995gÀ¯Éèà ºÉUÀÎqÀzÉêÀ£À PÉÆÃmÉAiÀÄ°è AiÀÄĤ¸É¯ïá ¸ÀºÀAiÉÆÃUÀzÀ°è EzÀÄ   CAPÀÄj¹vÁzÀgÀÆ ¥ÀoÀå¥ÀĸÀÛUÀ½®èzÉ vÀªÀÄUÉ ¨ÉÃPÁzÀ ¸ÁzsÀ£ÀUÀ¼À£ÀÄß vÁªÉà vÀAiÀiÁj¹PÉÆAqÀÄ ¤UÀ¢vÀ ¸ÁªÀÄxÀåðUÀ¼À£ÀÄß CzsÁå¥ÀPÀgÀÄ vÀªÀÄä «zÁåyðUÀ½UÉ PÀ°¸ÀĪÀÅzÀÄ F ¥ÀzÀÞwAiÀÄ ªÉʲµÀÖöå. F ¥ÀzÀÞwAiÀÄ°ègÀĪÀ ºÀAvÀUÀ¼À£ÀÄß »ÃUÉ ¸ÀÆa¸À§ºÀÄzÀÄ:
Ø  PÀ°PÁ ¸ÁªÀÄxÀåðUÀ¼À£ÀÄß ¸À«ÄÃQë¸ÀĪÀÅzÀÄ
Ø  CªÀÅUÀ¼À£ÀÄß PÀ°¸À®Ä ¸ÀÆPÀÛªÁUÀĪÀµÀÄÖ ¸ÀtÚ WÀlPÀUÀ¼À£ÁßV MqÉzÀÄPÉƼÀÄîªÀÅzÀÄ
Ø  MAzÀÄ ¸ÀªÀÄUÀæ PÀ°PÁ KtÂAiÀÄ WÀlPÀUÀ¼À£ÁßV CªÀÅUÀ¼À£ÀÄß ±ÉæÃtÂÃPÀj¹PÉƼÀÄîªÀÅzÀÄ
Ø  ¥ÀæwAiÉÆAzÀPÀÆÌ PÀ®PÉ, ¨ÉÆÃzsÀ£É, ¥ÀÄ£À§ð®£À ªÀÄvÀÄÛ ªÀiË®åªÀiÁ¥À£ÀUÀ¼ÀUÉ C£ÀÄPÀÆ®ªÁUÀĪÀAvÀºÀ ZÀlĪÀnPÉUÀ¼À£ÀÄß gÀƦ¸ÀĪÀÅzÀÄ
Ø  EªÀÅUÀ½AzÉ®è ºÉZÀÄÑ ¥ÀæeÁ¸ÀvÁÛvÀßPÀªÁzÀ vÀgÀUÀw ¤ªÀðºÀuÁ PÀæªÀÄ ªÀÄvÀÄÛ ¨sÀAiÀÄgÀ»vÀ ¤gÀAvÀgÀ ªÀiË®åªÀiÁ¥À£À gÀÆ¥ÀÄUÉÆÃAqÀªÀÅ
F PÀæªÀĪÀÅ 2000ನೇ ದಶಕದಲ್ಲಿ gÁeÁåzÀåAvÀ «¸ÀÛgÀuÉUÉÆArzÀÄÝ ¥ÀjuÁªÀÄUÀಳು ಉತ್ಸಾಹದಾಯಕವಾಗೇನು ಇಲ್ಲ. F ¥ÀzÀÞwAiÀÄÄ PÀPÀªÀÄ, ZÉÊvÀ£Àå ªÀÄvÀÄÛ mÉæöʪÉĸÀÖgÀÄUÀ¼À M¼ÉîAiÀÄ CA±ÀUÀ¼À£ÀÄß M¼ÀUÉÆArzÉ J£ÀߧºÀÄzÀÄ.
      EªÉ®èªÀÅUÀ¼À°è «zÁåyð ZÀlĪÀnPÉUÀ¼À£ÀÄß ºÉaѸÀĪÀÅzÀÄ, ZÀlĪÀnPÉUÀ¼À£ÀÄß CxÀð¥ÀÆtðUÉƽ¸ÀĪÀÅzÀÄ. «zÁåyðUÀ½UÀÆ CzsÁå¥ÀPÀjUÀÆ vÀªÀÄäzÉà jÃwAiÀÄ°è ªÀÄvÀÄÛ vÀªÀÄä ªÉÃUÀzÀ°è PÀ°AiÀÄ®Ä CªÀPÁ±À PÀ°à¸ÀĪÀÅzÀÄ F CA±ÀUÀ¼À£ÀÄß ¥ÀæzsÁ£ÀªÁVlÄÖPÉÆArªÉ. DzÀgÀÆ F MAzÉÆAzÀÄ ¥ÀzÀÞwAiÀÄ®Æè ZËPÀlÄÖ PÀlÄÖ¤nÖ£ÀzÁVzÉ. J®èªÀÇ ¥ÀoÀåªÀ¸ÀÄÛªÀ£ÀÄß aPÀÌ vÀÄtÄPÀÄUÀ¼À£ÁßV MqÉzÀÄPÉƼÀÄîªÀÅzÀÄ, ¤¢ðµÀÖ ¨ÉÆÃzsÀ£ÉÆÃzÉÝñÀzÉÆA¢UÉ CzÀ£ÀÄß ¸ÉÃj¹ ¤gÀƦ¸ÀĪÀÅzÀÄ, ¥ÀÄ£À§ð®£À ¤ÃqÀĪÀÅzÀÄ,  »ÃUÉ PÀ°PÉAiÀÄ£ÀÄß gÀƦ¸ÀĪÀÅzÀÄ EªÀÅ ¸ÀªÀiÁ£À CA±ÀUÀ¼ÀÄ. J£À ¹ J¥sï 2005 F ¥Àj¥ÁpVAvÀ ¨ÉÃgÉAiÉÄà DzÀ ¸ÉÊzÁÞAwPÀ ¤®ÄªÀÅ vÀ¼É¢zÉ. ¥ÀoÀåªÀ¸ÀÄÛªÀ£ÀÄß ZÀÆUÉÆð½¸ÀĪÀÅzÀÄ, ¥ÀÄ£À§ð®t ¤ÃqÀĪÀÅzÀÄ C®è; ªÀ¸ÀÄÛªÀ£ÀÄß ErAiÀiÁV £ÉÆÃqÀĪÀÅzÀÄ, PÀ®PÉAiÀÄ°è CxÀðªÀAwPÉ ¨É¼É¸ÀĪÀÅzÀÄ, PÀ°AiÀĨÉÃPÉA§ ¸ÀºÀd PÀÄvÀƺÀ®¢AzÀ PÀ°AiÀÄĪÀAvÉ ªÀåªÀ¸ÉÜUÉƽ¸ÀĪÀÅzÀÄ EªÉà PÀ°PÉAiÀÄ£ÀÄßAlÄ ªÀiÁqÀĪÀŪÀÅ JA§ÄzÀÄ J£ï ¹ J¥sï 2005gÀ ¤®ÄªÀÅ. «ÄvÀægÁzÀ ²æÃPÀȵÀÚ ±Á¹Ûç ¨Á½® EªÀgÀÄ ªÉ¯ÉÆÃgÉqï D±ÀæAiÀÄzÀ°è £ÀqÉAiÀÄÄwÛgÀĪÀ PÁAiÀÄðUÁgÀUÀ¼À°è ªÀÄvÀÄÛ EvÀgÀ ¸ÀAzÀ¨sÀðUÀ¼À°è EzÀ£Éßà ¥ÀæªÀÄÄRªÁV ¥ÀæZÀÄgÀ¥Àr¸ÀÄwÛzÁÝgÉ. F ¸ÉÊzÁÞAwPÀ ¸É¼ÉvÀUÀ¼À ¸ÀAzÀ¨sÀðzÀ°è ¥Àæw CzsÁå¥ÀPÀ vÀ£Àß ¤®ÄªÀ£ÀÄß vÁ£Éà gÀƦ¹PÉƼÀî¨ÉÃPÁUÀÄvÀÛzÉ. EzÀPÉÌ CUÀvÀåªÁzÀ ¸ÁévÀAvÀæöåªÀ£ÀÄß CªÀgÀÄ ªÀ»¸À¨ÉÃPÁUÀÄvÀÛzÉ. CzsÁå¥ÀPÀ CzsÁå¥ÀPÀgÀ £ÀqÀÄªÉ ºÉZÀÄÑ ¥ÀgÀ¸ÀàgÁ£ÀĪÀvÀð£É F CA±ÀPÉÌ ¸ÀºÀPÁjAiÀiÁUÀ§®ÄèzÀÄ.
UÀÄtªÀÄlÖ ºÉaѸÀ®Ä CzsÁå¥ÀPÀgÀÄ ªÀiÁqÀ¨ÉÃPÁzÉÝãÀÄ? F «µÀAiÀÄzÀ°è dUÀ£ÁßxÀ gÁªï ¸À«ÄwAiÀÄ CªÀ¯ÉÆÃPÀ£À¼ÀÄ »ÃVªÉ:
      ¥ÀæwAiÉƧ⠲PÀëPÀgÀÆ ¥ÀƪÀð ¹zÀÞvÉAiÀÄ£ÀÄß UÀA©üÃgÀªÁV ªÀiÁqÀĪÀÅzÀÄ 
      ²PÀëPÀgÀÄ PÀæªÀħzÀÞªÁV ±Á¯ÉUÉ ºÁdgÁUÀĪÀÅzÀÄ
      ªÀiË®åªÀiÁ¥À£À ¥ÀzÀÞwAiÀÄ£ÀÄß «±Áé¸ÁºÀð ¸ÁzsÀ£ÀUÀ¼À£ÀÄß §¼À¸ÀĪÀÅzÀÄ
±Á¯Á PÉÆoÀrAiÀÄ ¨ÉÆÃzsÀ£Á PÀ°PÁ «zsÁ£ÀzÀ ¸ÀÄzsÁgÀuÉ 
±Á¯ÉAiÀÄ°è ²PÀëPÀgÀ ºÁdjAiÀÄÄ vÀgÀUÀw PÉÆãÉAiÀÄ ¤ªÀðºÀuÉ ¸ÀªÀÄ¥ÀðPÀªÁUÀ®Ä ¥ÀæxÀªÀÄ ¥ÀæzsÁ£À CA±À. F CA±ÀPÉÌ ¥ÀæwAiÉƧ⠲PÀëPÀ DzÀåvÉ ¤ÃqÀ¨ÉÃPÀÄ ªÀiÁvÀæªÀ®è, G¸ÀÄÛªÁj C¢üPÁjUÀ¼ÀÄ, vÀgÀ¨ÉÃvÀÄzÁgÀgÀÄ, ¨ÉÃgɨÉÃgÉ E¯ÁSÁ C¢üPÁjUÀ¼ÀÄ, ¸ÀÄvÀÛt ¸ÀªÀÄÄzÁAiÀÄ J®ègÀÆ EzÀPÉÌ MvÀÄÛ ¤ÃqÀ¨ÉÃPÀÄ.
F MAzÉÆAzÀÆ ªÀÄÄRåªÁzÀĪÀÅ. ¥ÀƪÀð¹zÀÞvÉ JAzÉÆqÀ£É CzsÁå¥ÀPÀjUÉÀ ªÀÄvÀÄÛ G¸ÀÄÛªÁj C¢üPÁjUÀ½UÉ ºÉƼÉAiÀÄĪÀÅzÉAzÀgÉ ¥ÁoÀAiÉÆÃd£ÉUÀ¼À£ÀÄß §gÉAiÀÄĪÀÅzÉAzÀÄ. ¥ÁoÀAiÉÆÃd£ÉUÁV ¥ÁoÀAiÉÆÃd£É §gÉAiÀÄĪÀÅzÀÄ, vÀ¤SÁ¢üPÁjUÀ½UÉ vÉÆÃj¸ÀĪÀÅzÀPÁÌV ¨ÉÆÃzsÀ£ÉÆÃ¥ÀPÀgÀt EvÁå¢ vÀAiÀiÁj¹qÀĪÀÅzÀÄ, EvÁå¢ UÀÄtªÀÄlÖ ¸ÀÄzsÁgÀuÉUÉ ¥ÀÆgÀPÀªÁUÀĪÀÅ¢®è.  DzÀgÉ vÁ£ÀÄ PÀ°¸ÀĪÀ «µÀAiÀĪÀ£ÀÄß DPÀµÀðPÀªÁV¸ÀĪÀ ªÀÄvÀÄÛ AiÀiÁªÀ ¸ÁªÀÄxÀåðUÀ¼À£ÀÄß ¨É¼À¸À¨ÉÃPÁVzÉ JA§ÄzÀ£ÀÄß ¤zsÀðj¸ÀĪÀ CzÀPÉÌ ¸ÀÆPÀÛ vÀAvÀæUÀ¼À£ÀÄß gÀƦ¹lÄPÉƼÀÄîªÀ ¥ÀæQæAiÉÄUÀ¼ÀÄ vÀgÀUÀw PÉÆÃuÉAiÀÄ°è CzsÁå¥ÀPÀgÀ PÁAiÀÄð¤ªÀðºÀuÉAiÀÄ°è UÀªÀÄ£ÁºÀð zsÀ£ÁvÀäPÀ §zÀ¯ÁªÀuÉAiÀÄ£ÀÄß vÀgÀ§®èªÀÅ.
PÀ°vÀ «µÀAiÀÄUÀ¼ÀÄ £É£À¦gÀĪÀÅzÀ£ÀÄß zÀÈqsÀ¥Àr¹PÉƼÀÄîªÀÅzÉà ªÀiË®åªÀiÁ¥À£À ¥ÀzÀÞwAiÀÄ PÉÃAzÀæ CA±ÀªÁVzÉ. UÀÄtªÀÄlÖªÀÅ «µÀAiÀÄUÀ¼À ¸ÀägÀuɪÀiÁvÀæªÀ®è. ºÉÆð¸ÀĪÀ, ªÀåvÁå¸À ºÉüÀĪÀ, ¸ÀªÀiÁ£ÀUÀÄtUÀ¼À£ÀÄß DAiÀÄÄÝ ºÉüÀĪÀ, «±Éèö¸ÀĪÀ, ¸ÁªÀiÁ£Àå ¤AiÀĪÀÄUÀ¼À£ÀÄß C£Àé¬Ä¹ ¸ÀªÀĸÉåUÀ¼À£ÀÄß ¥ÀjºÀj¸ÀĪÀ EAvÀºÀ ¸ÁªÀÄxÀåðUÀ¼À£ÀÄß ¥ÀjÃQë¸ÀĪÀ PÁAiÀÄð ªÀiË®åªÀiÁ¥À£ÀªÀ£ÀÄß ªÁå¥ÀPÀUÉƽ¸ÀÄvÀÛzÉ ªÀÄvÀÄÛ vÀgÀUÀwAiÀÄ ¨ÉÆÃzsÀ£ÉAiÀÄ°è UÀÄuÁvÀäPÀvÉAiÀÄ£ÀÄß ºÉaѸÀÄvÀÛzÉ.
NCF   National curriculum frame work

NCFCE   National curriculum frame work for school educaton

Friday 13 January 2017

ಮುಳಿಯರು ಕಲಾಮರೂ



                                 ಮುಳಿಯರು ಕಲಾಮರೂ


         ಕೃಷ್ಣಾಷ್ಟಮಿಗೂ ಬುಡಾನುಸಾಬರಿಗೂ ಏನು ಸಂಬಂಧ ಎಂಬಂತೆ ಕಾಣಿಸಬಹುದು ಈ ಶೀರ್ಷಿಕೆ. ಅವರು ಬೇರೆ ಬೇರೆ ಧರ್ಮಾವಲಂಬಿಗಳು ಎಂಬಷ್ಟರಿಂದಲೇ ಅಲ್ಲ.ಮುಳಿಯ ತಿಮ್ಮಪ್ಪಯ್ಯ  ಒಬ್ಬ ಪ್ರಾಚೀನ ಕನ್ವಿನಡ ದ್ವಾಂಸ; ಅಬ್ದುಲ್ ಕಲಾಮ್ ಮಿಸೈಲ್ ವಿಜ್ಞಾನಿ, ಈಚೆಗೆ ರಾಷ್ಟ್ರಪತಿಯಾಗಿದ್ದವರು. ಆದರೆ ಇಂತಹ ವೈರುಧ್ಯಗಳ ನಡುವಣ ನೇಯಿಗೆಯೇ ಅಲ್ಲವೆ ನಮ್ಮೀ ಭವ್ಯ ಭಾರತ!!
          ಭವಿಷ್ಯವನ್ನು ಸುಖಮಯ, ಕೀರ್ತಿಪೂರ್ಣ ಮತ್ತು ಸುಂದರತರವಾಗಿಸುವುದು ಹೇಗೆ ಇದೇ ಕಲಾಮರ ಒಂದಂಶದ ಕಾಳಜಿ. ಅದಕ್ಕೆಂದೇ ಅವರು ಹೋದಹೋದಲ್ಲೆಲ್ಲ ಮುಂದಿನ ಪ್ರಜೆಗಳೊಂದಿಗೆ ಮಾತನಾಡುವ ಧರ್ಮೋತ್ಸಾಹಯುತ ಕಾಳಜಿ  ತೋರಿದ್ದು; ಅವರ ಮಾತು ಸಮಾಜದ ಪ್ರತಿಯೊಂದು ನಡೆಯನ್ನು ಒಳಗೊಳ್ಳುತ್ತಿದ್ದುದು. ಇಂತಹ ಒಂದು ಸಂದರ್ಭದಲ್ಲಿ ಹುಡುಗಿಯೊಬ್ಬಳು ರಾಷ್ಟ್ರಪತಿ ಮಹೋದಯರನ್ನು ಕೇಳಿದಳು: ದೇಶದಲ್ಲಿ ವ್ಯಾಪಿಸಿರುವ ಭ್ರಷ್ಟಾಚಾರವನ್ನು ತೊಲಗಿಸುವಲ್ಲಿ ತನ್ನಂತಹ ವಿದ್ಯಾರ್ಥಿಯ ಪಾತ್ರವೇನೆಂದು. ಒಂದು ಕ್ಷಣ ಸ್ತಂಭಿತರಾದ ಕಲಾಮ್ ಹೇಳಿದರು - ಭ್ರಷ್ಟಾಚಾರ ನಿರ್ಮೂಲನೆಯನ್ನು ನಿನ್ನಂತಹವರು ಮನೆಯಿಂದ ಪ್ರಾರಂಭಿಸಬೇಕೆಂದು. ತನ್ನ ತಂದೆ ಅಥವ ತಾಯಿ ಅಥವ ಇಬ್ಬರೂ ಭ್ರಷ್ಟ ವ್ಯವಹಾರಗಳಲ್ಲಿ ತೊಡಗಿದ್ದಾರೆಂದಾದರೆ ಅವರು ಮಾಡುತ್ತಿರುವುದು ಸರಿಯಲ್ಲವೆಂಬುದನ್ನು ಮಕ್ಕಳು ಅವರಿಗೆ ಹೇಳಬೇಕು; ಅವರು ಭ್ರಷ್ಟ ವಿಧಾನಗಳನ್ನು ಬಳಸದಂತೆ ತಡೆಯಬೇಕು. ಹೀಗೆ ಪ್ರತಿಮನೆಯೂ ಸತ್ಯವಿಧಾನದ ಮಾದರಿಯಾದರೆ ದೇಶವೇ ಸತ್ಯಯುಗದಲ್ಲಿ ಪ್ರವರ್ತಿಸುತ್ತದೆ.

             ಇದೇ ಮುಳಿಯರ ದೃಷ್ಟಿ ಕೂಡ. ಅವರ ನಡೆನುಡಿಗಳು ಇಂದು ಕಾಣೆಯಾಗಿರಬಹುದು. ಬರಹ ಅಕ್ಷರ; ಮುಳಿಯರ ಬರಹಗಳು ಇಂದಿಗೂ ಲಭ್ಯ. ಅವುಗಳಲ್ಲಿ ಕಾಣಸಿಗುವುದು ಮುಳಿಯರ  ಈ ದೃಷ್ಟಿ. 
               ಮುಳಿಯರದು ರಾಷ್ಟ್ರಮಟ್ಟದ ಕರಿಶ್ಮ ಅಲ್ಲ. ಅವರು ರಾಷ್ಟ್ರಮಟ್ಟದಲ್ಲಿ ಮಾತನಾಡುವವರಲ್ಲ. ಸ್ಥಳೀಯವಾಗಿ ಕಾಡುವ ಪ್ರಶ್ನೆಗಳಿಗೆ ಉತ್ತರ ಹುಡುಕುವವರು. ತಮ್ಮ ಸುತ್ತಣಕ್ಕೆ ಪ್ರತಿಕ್ರಿಯಿಸುತ್ತಾ ಸಾರ್ವತ್ರಿಕವನ್ನು ಅನಾವರಣಗೊಳಿಸುವವರು. ಸಾಮಾಜಿಕ ಕೆಡುಕುಗಳನ್ನು ಬಿಡಿಸುವವರು. ಈ ನಿಟ್ಟಿಲ್ಲಿ ಅವರ ಕಾದಂಬರಿಗಳಲ್ಲೊಂದಾದ  ಪಶ್ಚಾತ್ತಾಪದ ಘಟನೆಯೊಂದನ್ನು ಉದಾಹರಿಸಬಹುದು.

                ವಿಟ್ಲ ಸೀಮೆಯ ಕುಟುಂದಲ್ಲೊಬ್ಬ ಭ್ರಷ್ಟ. ಅವನ ಹೆಸರು ನಾಗಪ್ಪ. ತಾನು ಯಾವ ಮರದ ನೆರಳಿನಿಂದಾಗಿ ಬೆಳೆದನೋ ಅದಕ್ಕೇ ಬದನಿಕೆಯಾಗುವ ಪರಿ. ಮುಗ್ಧ ಕುರಿಯ ಮುಖವಾಡ ತೊಟ್ಟ ತೋಳದ ಹಾಗೆ. ತನ್ನ ಸ್ವಾರ್ಥಕ್ಕಾಗಿ ಸುಳ್ಳು ಸುಲಿಗೆ ಕೊಲೆ ಯಾವುದಕ್ಕೂ ಹೇಸುವವನಲ್ಲ. ಇವನ ಮಗ ನಾರಾಯಣ. ತನ್ನನ್ನು ತಾನು ತೇದು ತ್ಯಜಿಸಿಕೊಂಡು ತನ್ನಪ್ಪನ ಪ್ರವೃತ್ತಿಯನ್ನು ತಿದ್ದಿ ಸಾಧಿಸಿದವ ಈ ಕುಲ ಪುತ್ರ. ಕೊನೆಯಲ್ಲಿ ತನ್ನ ತಪ್ಪುಗಳಿಗೆಲ್ಲ ಪಶ್ಚಾತ್ತಾಪಪಟ್ಟು ಸುತ್ತಣವನೆಲ್ಲ ಸಂಭ್ರಮದಲ್ಲಿ ಮುಳುಗಿಸುತ್ತಾನೆ ನಾಗಪ್ಪ. ಮಗ ಮನೆಯನ್ನು ಹೀಗೆ ಸರಿಮಾಡಿದ; ಕುಲಪುತ್ರನಾದ. ಇದುವೆ ಕೃತಿಯ ನಾಲ್ಕು ಕಾಲ ನಿಲ್ಲುವ ನಿಲುವು.

                  ಮಹಾಭಾರತದಲ್ಲಿ ವಿದುರ ನೀಡಿದ ನೀತಿಯೂ ಇದೇ. ಇದೇ ರಾಮಾಯಣದಲ್ಲಿ ವಿಭೀಷಣ ತೋರಿದ ರೀತಿ. ಕುರುಡ ಧೃತರಾಷ್ಟ್ರನ ನೂರು ಮಕ್ಕಳು ಬೇರೆಯೇ ತರಹದವರಾದರೆ ಏನಾಯಿತು? ಮಗಸಮಾನನಾದ ವಿದುರ ದಾರಿತಪ್ಪಿದವರಿಗೆ ಹೇಳಬೇಕಾದ್ದನ್ನು ಹೇಳುವ ಧೈರ್ಯ ಮಾಡಿದ. ವಿಭೀಷಣ ತನ್ನ ರಾಕ್ಷಸೀ ಅಣ್ಣತಮ್ಮಂದಿರನ್ನು ಸರಿದಾರುಗೆ ತರಲು ಯತ್ನಿಸಿದ. ಈ ನೆಲದ ಸಾರಸತ್ವ ರಸವೆ ಇಂತಹದು. ಈ ಸತ್ಯ ತಳದಲ್ಲೆಲ್ಲೋ ತಳುವಿ ಹರಿಯುತ್ತಿರುವುದರಿಂದಲೇ ಭಾರತದ ಭವಿಷ್ಯ.

(ಈ ಲೇಖನವು ಜುಲೈ 2006ರ ಯುಗಪುರುಷದಲ್ಲಿ ಪ್ರಕಟವಾಗಿದೆ).

ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀರಾಮಚರಿತ್ರ ಮಂಜರಿ




ರಾಘವೇಂದ್ರ ತೀರ್ಥರು ಶ್ರೀ ರಾಮಚರಿತ್ರಮಂಜೆರಿ ಎಂಬ ಹನ್ನೊಂದು ಶ್ಲೋಕಗಳ ಪು್ಟ್ಟ ಕೃತಿಯೊಂದನ್ನು ರಚಿಸಿದ್ದಾರೆ. ಇದು ಚಕ್ಕದಾಗಿದ್ದು ರಾಮಾಯಣದ ವಿವರವಾದ ಪುನರ್ಸೃಷ್ಟಿಯಲ್ಲ. ಬದಲಾಗಿ ಇಲ್ಲಿರುವ ಶ್ಲೋಕಗಳನ್ನು ಓದಿದಂತೆಲ್ಲ ರಾಮಾಯಣದ ಘಟನೆಗಳು ನೆನಪಿಗೆ ಬಂದು ದಿನವೂ ರಾಮಾಯಣದ ಘಟನೆಗಳನ್ನು ಸ್ಮರಣೆಗೆ ತಂದುಕೊಳ್ಳಲು ಸಹಾಯಕ. ನಿತ್ಯ ಪಾರಾಯಣಕ್ಕೆ ಸೂಕ್ತವಾಗಿದೆ. ಇದರ ಒಂದು ಪದ್ಯಾನುವಾದವನ್ನು ಸಾಂಗತ್ಯದಲ್ಲಿ ಇಲ್ಲಿ ಪ್ರಯತ್ನಿಸಿದ್ದೇನೆ. ಇಲ್ಲಿರುವ ಗುಣಗಳೆಲ್ಲ ಶ್ರೀ ರಾಯರವು. ದೋಷರಹಿತವಾಗಿ ಮಾಡಿದ್ದೇನೆ ಎನ್ನುವ ಎದೆಗಾರಿಕೆ ನನಗಿಲ್ಲ.

ಶ್ರೀರಾಮಚರಿತ್ರ ಮಂಜರಿ
         ಮೂಲ: ಶ್ರೀರಾಘವೇಂದ್ರತೀರ್ಥರು
            ಕನ್ನಡಕ್ಕೆ: ಡಾ ಬಿ ವಿ ಮಹೀದಾಸ
ಪೂರ್ವದಲಿ ಸಿರಿಯರಸನಿಂದು ದಶರಥಪುತ್ರ
ಕರೆಯೆ ರಾಜರ್ಷಿ ಚಿಂತಿಸದೆ
ನಡೆಯುತನುಜಸಹಿತ ಹೊಡೆದ ತಾಟಕಿಯ
ಮತ್ತೆಷ್ಟೋ ರಕ್ಕಸರ ಲೀಲೆಯಿಂದ                   1

ಪಡೆದನು ಮಂತ್ರಗಳ, ಶಿವಧನು ಮುರಿದು
ಸೀತೆಯ ವರಿಸಿ ಮುನ್ನಡೆದ
ಕಲ್ಲ ಕರಗಿಸಿ ನೀರೆಯನು ಹೊರತಂದು
ತನ್ನಯ ಗರಿಮೆಯ ಮೆರೆದ                            2
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಸೀತೆಯೊಡ ಸಾಕೇತ ದಾರಿಯಲಿಸಾನುಜನು
ಭಾರ್ಗವ ಪಂಥವನೊಪ್ಪಿ
ವಿಷ್ಣುಧನು ಹೆದೆಗಟ್ಟಿ ಕೆಡವೆ ಸುರಾರಿಯ
ಸ್ತುತಿಸಿದರು ಜನರು ಪುರದಲ್ಲಿ                                    3

ಶುಭಕರಾಗುಣಲೇಶರಹಿತಾಂತರಾತ್ಮನ
ಪರಿಪರಿಯಲಿ ಪೊಗಳಿ ನುತಸಿದರು
ಕೈಕಯೀ ಪ್ರೀತಿಗೆ ಸೋತು ಅರಸುಗಳಿ
ಗಸಹಜ ವಲ್ಕಲ ತೊಡಿಸೆ                               4
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ                                                  
ಅಳುಕದೆ ನಡೆದರು ವನಕೆ ಗಂಗೆಯತಟದಿ
ಗುಹನರ್ಚಿಸೆ ಚಂದದಿ ಜಟೆಗಟ್ಟಿ
ಪೂಜಿಸೆ ಗುರುಪುತ್ರ ನದಿಯ ದಾಟುತ
ಚಿತ್ರಕೂಟಕೈತಂದನು                                   5

ತಾಯಂದಿರೊಡಗೂಡಿ ಭರತತಾ ಅರುಹಲು
ತಂದೆಯ ಮರಣ ವಾರ್ತೆ
ಸಂತೈಸಿಯವರ್ಗಳ ಪಿತನ ಸದ್ಗತಿಗೆ
ತೀರ್ಥವನಿತ್ತು ಪೂಜಿಸಿದ                                6
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ

ತನ್ನಯ ಪಾದುಕೆ ನೀಡುತ ಭರತಂಗೆ
ವಹಿಸಿ ನೆಲರಕ್ಷಣೆಯ ಭಾರ
ಪೂಜೆಗೊಂಡತ್ರಿಯಿಂ ನಡೆದನರಣ್ಯಕೆ
ದಂಡಕವದು ಘೋರ ಸುಂದರ                         7

ತಾಪಸೇಷ್ಟಗೆ ಮೋಕ್ಷಪದವನಿತ್ತಸುರನ
ಕುಲವನೆ ಸಂಹಾರಗೈದು
ಋಷಿಪುಂಗವರ್ಗೆಲ್ಲ ನೀಡಿಯಭಯವನ್ನು
ಅಗಸ್ತ್ಯರಿನಾಯುಧ  ಪಡೆದ                             8
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ರಾಕ್ಷಸಿಯ ಮಾಡಿದೆ ವಿಕಲಾಂಗಿ ನೀನಿರುತ
ಪಂಚವಟಿಯ ನೆರಳಿನಲ್ಲಿ
ಸಂಹಾರಗೈದೆ ಯಾರ್ಯಾರ ನೀನಲ್ಲಿ
ಕ್ರವ್ಯಾದ ಖರದೂ ಷರನೆಲ್ಲ                           9

ತ್ರಿಶೀರ್ಷನ ಕೊಂದೆ ಮಾರೀಚನ ಸದೆದೆ
ಜಟಾಯುಗೆ ಸ್ವಪದವ ನೀಡಿದೆ
ತೋರಲಿಲ್ಲವೆ ಅವ ಸೀತಾಕೃತಿಯಿದ್ದ
ಸ್ಥಳಕೆ ಮಾರ್ಗವ ಚಂದದಿ                              10
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಪಂಪಾತೀರವ ತಲುಪುತ ಶಬರಿಯ
ಭಕ್ತಿಯಿಂದಾಗಿ ಸಂತುಷ್ಟ
ನೀಡಿಯಾಕೆಗೆ ಮುಕ್ತಿ ಹನುಮನ ನುಡಿಗೊಲಿದು
ಬೆಳೆಸಿದ ಸುಗ್ರೀವ ಸಖ್ಯ                                 11

ಬೊಮ್ಮನ ವರದಿಂದ ಬಲಪಡೆದು ನಿಂದಿಹ
ರಕ್ಕಸಗಟ್ಟಿಗರ ರೂಪ
ವಟವೃಕ್ಷವೇಳನು ಛೇದಿಸಿ ವಾಲಿಯ
ರಾಜ್ಯವನಿತ್ತ ಸುಗ್ರೀವಗೆ                                 12
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ



ನಿಂದಲ್ಲಿ ಮಾಲ್ಯವತ್ ಗಿರಿಯಲ್ಲಿಕೆಲದಿನ
ಕಳಿಸಿ ಕಪೀಶರ ದಿಕ್ಕಿಗೆಲ್ಲ
ಸೀತೆಯ ಹುಡುಕಿ ಕರೆತಂದ ಹನುಮನ
ಮಾತಿಗೆ ಲಕ್ಷ್ಯವ ಕೊಟ್ಟ                                14

ಸುಗ್ರೀವ ಕಪಿಸೈನ್ಯದೊಂದಿಗೆ ಧಾಳಿಟ್ಟ
ದಶಮುಖಾನುಜನ ಮಾನೈಸಿ
ಸಾಗರನಾದೇಶ ಸೇತುವ ಕಟ್ಟಿಸಿ
ದೈತ್ಯರ ನಾಶವ ಗೈದ                                   15
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಸೋಲಿಸಿ ಓಡಿಸೆ ರಾವಣ ಕಳಿಸಿದ
ಎಬ್ಬಿಸಿ ಕುಂಭ ಕರ್ಣನ್ನ
ಕೆಡೆಯಲು ಅವನನ್ನು ಇಂದ್ರಜಿತು ಕಟ್ಟಿದ
ಕಪಿಗಳ ನಾಗಾಸ್ತ್ರದಿಂದ                                  16

ಗರುಡನೆ ಮುಂಬಂದು ಸಂಕಲೆ ಗಳಬಿಡಿಸಿ
ರಾಮನ ಆಶಿಷ ಪಡೆದ
ಲಕ್ಷ್ಮಣ ಕೊಂದನು ಅಸುರಜನ, ಮತ್ತೆಲ್ಲ
ಕಪಿಗಳು ಏಳಲು ಚೇತರಿಸಿ                               17
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ
ಬಳಸಿ ವಿಜ್ಞಾನಾಸ್ತ್ರ ಕಾಯ್ದ ಕಪಿಗಳನೆಲ್ಲ
ಹನುಮಗೆ ಸಂತೋಷ ತಂದ
ಗುಡ್ಡವ ತಂದಿಟ್ಟ ಹನುಮನ ಹರ್ಷಿಸಿ
ಕಾಯಲಿ ರಾಮನು ಅನಘ                              18

ಸಂಹಾರಗೈದು ಕ್ರವ್ಯಾದರನಲ್ಲದೆ
ದಶವದನಾಸುರನನ್ನು
ಬ್ರಹ್ಮಾದಿಗಳ ಪುಷ್ಪ ವೃಷ್ಟಿಯಲಿ ಮೀಯುತ
ಅಗ್ನಿಯಿಂದೆದ್ದ ಸೀತೆಯುತ                            19
                                                            ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                            ಬಿಡದೆ ಎಂದೆಂದು ಅನವರತ


ಮಾಡಿವಿಭೀಷಣಗೆ ಲಂಕೆಯ ಪಟ್ಟವ
ಏರಿದ ಪುಷ್ಪಕ ವಿಮಾನ
ಸಾಕೇತದಲಿಮುನಿಗಳಾನುಗ್ರಹ ಪಡೆದು
ನಡೆಸಿದ ರಾಜ್ಯಭಾರವನು                               20

ಪಾಲಿಸೆ ಸಮೃದ್ಧ ಭುವಿಯನು ಕುಂದಿರದೆ
ಮೆಚ್ಚಿ ಸ್ತುತಿಸಲು ಮುನಿಗಣ
ಭರತನು ಯುವರಾಜ ರಕ್ಷೆಯು ಲಕ್ಕಣಗೆ
ಪ್ರಜೆಗಳ ಸಂತಸಕೆಣೆಯೇ                                21
                                                                        ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                                        ಬಿಡದೆ ಎಂದೆಂದು ಅನವರತ
ಶತ್ರುಘ್ನ ಕೊಂದನು ಲವಣಾಸುರನನ್ನು
ದುಷ್ಟರೆಲ್ಲರನು ಮತ್ತೆ
ಆಶ್ವಮೇಧವಗೈದ ಶ್ರೀರಾಮಚಂದ್ರ
ಕೂಡಿದ ವನದಲಿ ಕುಶಲವರ                           22

ಶ್ವೇತದ್ವೀಪವ ತಲುಪಿದ ಶ್ರೀ ರಾಮ
ಸೇವಿತಹ್ರೀಶ್ರೀದೇವಿಯರಿಂದ
ಹನುಮನು ಹಿಡಿಯಲು ಶ್ವೇತಚ್ಛತ್ರವ
ಬ್ರಹ್ಮಾದಿ ದೇವರು ಸ್ತಿತಿಸರೆ                            23
                                                                     ಕಾಯೋ ನೀನೆಮ್ಮ ಶ್ರೀ ರಾಮಚಂದ್ರನೆ
                                                                     ಬಿಡದೆ ಎಂದೆಂದು ಅನವರತ
ಮಂಗಳವು ಶ್ರೀರಾಮಚಂದ್ರಂಗೆ ಮಂಗಳವು
ಸೀತೆಗೆ ಹದಿನಾಲ್ಕು ಲೋಕಕೆ
ಮಂಗಳವು ಗುರು ರಾಘವೇಂದ್ರರಿಗೆ ಶ್ರೀಮಧ್ವ
ಮತವರ್ಧನಕೃತಿಕಾರರ್ಗೆ